ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ 8 ವಲಯಗಳಿದ್ದು ಅದರಲ್ಲಿ ಬೆಂಗಳೂರು ದಕ್ಷಿಣ ವಲಯ ವಾರ್ ರೂಮ್ ಜವಾಬ್ದಾರಿ ತುಳಸಿ ಮದ್ದೇನಿ ಮತ್ತು ವೀರಭದ್ರಯ್ಯ ಅವರದ್ದಾಗಿದ್ದು ದಕ್ಷಿಣ ವಲಯಕ್ಕೆ ಸಂಬಂಧಿಸದ ಸರ್ಪರಾಜ್ ಖಾನ್ ಅವರ ವಿರುದ್ದ ಆರೋಪ ಮಾಡಿದ್ದು ಏಕೆ? ಎಂದು ಮಾಜಿ ಸಚಿವ ಶಾಸಕ ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಳಸಿ ಮದ್ದೇನೇನಿ ಹಾಗೂ ವೀರಭದ್ರಯ್ಯ ನವರೇ ಜಾಹಿರಾತು ಕರೆದು ಅರ್ಜಿ ಸ್ವೀಕರಿಸಿ ವಾಕಿನ್ ಇಂಟರ್ವ್ಯೂ ನಡೆಸಿ 214 ಸಿಬ್ಬಂದಿ ನೇಮಕಾತಿ ಮಾಡಿದ್ದಾರೆ. ಆ ಪೈಕಿ 17 ಮಂದಿ ಮಾತ್ರ ಅಲ್ಪಸಂಖ್ಯಾತಸಮುದಾಯಕ್ಕೆ ಸೇರಿದವರು, ಹಾಗೇ 7 ರಿಂದ 8 ವೈದ್ಯರ ಪೈಕಿ 1 ಇಬ್ಬರು ಮಾತ್ರ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. ಈಗಿರುವವಾಗ ಪ್ರಕರಣದಲ್ಲಿ ಒಂದು ಸಮುದಾಯವನ್ನೇ ಗುರಿಯಾಗಿರಿಸಿ ಹೆಸರು ಪ್ರಸ್ತಾಪಿಸಿರುವ ಹಿಂದಿನ ಉದ್ದೇಶ ಏನು ಎಂದು ಕೇಳಿದ್ದಾರೆ.
ಅಷ್ಟೇ ಅಲ್ಲದೆ, ಈಗ ಆಗುತ್ತಿರುವ ಕೆಲಸ ಕಾಲ್ ಸೆಂಟರ್ ಮಾದರಿ ಕೆಲಸವಾಗಿದ್ದು ಕರೆ ಸ್ವೀಕರಿಸಿ ಮಾಹಿತಿ ನೀಡುವದಷ್ಟೇ. ಇಷ್ಟಕ್ಕೂ
ಈ ಅಧಿಕಾರಿಗಳು ವಾಕಿನ್ ಇಂಟರ್ ವ್ಯೂ ಮಾಡಿದಾಗ ನಿಮಗೆ ಮಾಹಿತಿ ಇರಲಿಲ್ಲವೇ? ದಕ್ಷಿಣ ವಲಯದ ಸಂಭಂಧಿಸಿದ ಅಧಿಕಾರಿ ಯಾರು ಎಂಬುದು ನಿಮಗೆ ಗೊತ್ತಿರಲಿಲ್ಲವೇ? ಮಾಹಿತಿ ಇಲ್ಲದೇ ಮಾತನಾಡಿದ್ದರೆ ಅದು ನಿಮ್ಮ ಅಪ್ರಬುದ್ದತೆ ತೋರಿಸುತ್ತದೆ ಸಂಸದರಾಗಿರುವವರಿಗೆ ಮಾಹಿತಿಯ ಕೊರತೆ ಇದೆ ಎಂಬ ಸಂದೇಶ ರವಾನೆಯಾಗುತ್ತದೆ.ಇನ್ನೂ ವಿಚಾರ ಗೊತ್ತಿದ್ದು ಗೊತ್ತಿಲ್ಲದವರಂತೆ ಆರೋಪಿಸಿರುವುದರ ಹಿಂದಿನ ದುರುದ್ದಶವೇನು? ಎಂದಿದ್ದಾರೆ.