ಬೆಂಗಳೂರು: 2021 ನೇ ಸಾಲಿನ ಪ್ರೆಸ್ಕ್ಲಬ್ನ ವರ್ಷದ ವ್ಯಕ್ತಿ ಪ್ರಶಸ್ತಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನುಆಯ್ಕೆ ಮಾಡಲಾಗಿದೆ.
ಪದ್ಮಶ್ರೀ ಪುರಸ್ಕೃತಶ್ರೀ ಹರೇಕಳ ಹಾಜಬ್ಬ ಮತ್ತು ಕೊರೋನಾ ನಿರ್ವಹಣೆಯಲ್ಲಿ ತೋರಿದ ಗಮನಾರ್ಹ ಸಾಧನೆ ಮಾಡಿದ ರಾಜ್ಯ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಅವರು ಪ್ರೆಸ್ಕ್ಲಬ್ನ ವಿಶೇಷ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದಾರೆ. ಇದರ ಜೊತೆಗೆ ಪ್ರೆಸ್ಕ್ಲಬ್ನ ವಾರ್ಷಿಕ ಪ್ರಶಸ್ತಿಗೆ ಹಿರಿಯ ಪತ್ರಕರ್ತರಾದ ಭಾಸ್ಕರ್ರಾವ್, ಪದ್ಮರಾಜದಂಡಾವತಿ, ರಂಜಾನ್ದರ್ಗಾ, ಕೆಸ್ತೂರುಗುಂಡಪ್ಪ ವಾಸುಕಿ, ಡಾ. ಜಗದೀಶ್ಕೊಪ್ಪ, ಬಾಲಸುಬ್ರಮಣ್ಯಂ, ಬಿ.ವಿ. ಶಿವಶಂಕರ, ಕೆ.ಎಂ. ವೀರೇಶ್, ವಾಸಂತಿ ಹರಿಪ್ರಕಾಶ್, ಪ್ರಶಾಂತ್ ನಾಥೂ, ಎಸ್.ಹೆಚ್. ಮಾರುತಿ, ಭಾನು ಪ್ರಕಾಶ್ಚಂದ್ರ, ಯತೀಶ್ಕುಮಾರ್, ಸುದರ್ಶನ್ ಚೆನ್ನಂಗಿಹಳ್ಳಿ, ದೊಡ್ಡ ಬೊಮ್ಮಯ್ಯ ಅವರು ಬಾಜನರಾಗಿದ್ದಾರೆ.
ಇದೇ ಸಂದರ್ಭದಲ್ಲಿ 2020 ನೇ ಸಾಲಿನ ಪ್ರೆಸ್ಕ್ಲಬ್ ವರ್ಷದ ವ್ಯಕ್ತಿಗೆ ವಿಪ್ರೊ ಸಂಸ್ಥೆಯ ಅಧ್ಯಕ್ಷ ಅಜೀಂ ಪ್ರೇಮ್ಜಿ ಮತ್ತು ಚಿತ್ರ ನಟ ಸುದೀಪ್ ಹಾಗೂ ನಾರಾಯಣ ಹೃದಯಾಲಯದ ಡಾ. ದೇವಿಪ್ರಸಾದ್ ಶೆಟ್ಟಿ ಅವರಿಗೆ ವಿಶೇಷ ಪ್ರಶಸ್ತಿ ನೀಡಲಾಗುತ್ತದೆ.
2020 ಹಾಗೂ 2021ನೇ ಸಾಲಿನ ಎರಡೂ ವರ್ಷದ ಪ್ರೆಸ್ಕ್ಲಬ್ ವರ್ಷದ ವ್ಯಕ್ತಿ ಮತ್ತು ವಿಶೇಷ ಪ್ರಶಸ್ತಿ ಹಾಗೂ ಪ್ರೆಸ್ಕ್ಲಬ್ ವಾರ್ಷಿಕ ಪ್ರಶಸ್ತಿ ಪುರಸ್ಕೃತರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸನ್ಮಾನಿಸಲಿದ್ದಾರೆ.