News Karnataka Kannada
Friday, May 17 2024
ಬೆಂಗಳೂರು ನಗರ

ಫರ್ಜಿ ಕೆಫೆಯಲ್ಲಿ ನಲಪಾಡ್  ಅರ್ಭಟಕ್ಕೆ ಮೌನವಾದ ರಾಜಕಾರಣಿಗಳ ಮಕ್ಕಳು

Photo Credit :

ಫರ್ಜಿ ಕೆಫೆಯಲ್ಲಿ ನಲಪಾಡ್  ಅರ್ಭಟಕ್ಕೆ ಮೌನವಾದ ರಾಜಕಾರಣಿಗಳ ಮಕ್ಕಳು

ಬೆಂಗಳೂರುಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಮೊಹಮದ್‌ ನಲಪಾಡ್‌ ತನ್ನ ಸಹಚರರೊಂದಿಗೆ ಸೇರಿ ಫರ್ಜಿ ಕೆಫೆಯಲ್ಲಿ ನ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವಾಗ, ಕೆಲ ಪ್ರಭಾವಿ ರಾಜಕಾರಣಿಗಳ ಮಕ್ಕಳು ಈ ವೇಳೆ ಇದ್ದರೂ ಎಂದು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಜಾರ್ಜ್ ಶೀಟ್ ನಲ್ಲಿದೆ.

ಈ ವೇಳೆ ನಲಪಾಡ್ ಅಕ್ರೋಶವನ್ನು ನಿಯಂತ್ರಿಸಲು ಸಾಧ್ಯವಾಗದೇ ಸ್ಥಳದಿಂದ ಹೊರಟು ಹೋಗಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ಫರ್ಜಿ ಕೆಫೆಯಲ್ಲಿ ಬಿಜೆಪಿ ಸಂಸದ ಪಿ.ಸಿ.ಮೋಹನ್‌ ಪುತ್ರ ಪಿ.ಎಂ.ರಿತಿನ್‌, ಶಾಸಕ ಮುರುಗೇಶ್‌ ನಿರಾಣಿ ಪುತ್ರ ವಿಶಾಲ್‌ ನಿರಾಣಿ, ಮಾಜಿ ಸಚಿವ ಎಂ.ಎಚ್‌.ಅಂಬರೀಷ್‌ ಪುತ್ರ ಅಭಿಷೇಕ್‌ ಮತ್ತು ಮಾಜಿ ಸಚಿವ ಎಚ್‌.ಸಿ. ಮಹದೇವಪ್ಪ ಪುತ್ರ ಸುನಿಲ್‌ ಬೋಸ್‌ ಇದ್ದರು.

ಜಾರ್ಜ್ ಶೀಟ್ ನಲ್ಲಿ ಏನೇನಿದೆ: ನಲಪಾಡ್‌ ಹಾಗೂ ನಾನು ಬಾಲ್ಯದ ಸ್ನೇಹಿತರು. ಆತ ಶಾಂಪೇನ್ ಬಾಟಲಿ ಹಿಡಿದು, ನನ್ನ ಮುಖದ ಮೇಲೆ ಚಿಮ್ಮಿಸಲು ಯತ್ನಿಸಿದ. ಅಲ್ಲೇ ಪಕ್ಕದಲ್ಲಿ ಕುಳಿತಿದ್ದ ವಿದ್ವತ್‌ನ ಕಾಲಿಗೆ ಬಡಿದಿದೆ. ಈ ವೇಳೆ ವಿದ್ವತ್, ‘ ಸ್ವಲ್ಪ ನೋಡಿಕೊಂಡು ಓಡಾಡಿ ಎಂದು ನಲಪಾಡ್ ಗೆ ಹೇಳಿದ್ದಾನೆ. ಇದಕ್ಕೆ ನಲಪಾಡ್‌, ‘ನಾನು ಯಾರು ಗೊತ್ತ? ಎಂಎಲ್‌ಎ ಮಗ. ನನಗೇ ಎದುರು ಮಾತನಾಡುತ್ತೀಯಾ. ಕ್ಷಮೆ ಕೇಳು. ನನ್ನ ಬೂಟನ್ನು ನೆಕ್ಕು’ ಎಂದಿದ್ದಾನೆ. ಅದಕ್ಕೆ ವಿದ್ವತ್ ನಿರಾಕರಿಸಿದಾಗ ನಲಪಾಡ್ ಹಾಗೂ ಆತನ ಸಹಚರರೂ ಹಲ್ಲೆ ನಡೆಸಿದ್ದಾರೆ ಎಂದು ರಿತಿನ್ ಪೊಲೀಸರಿಗೆ ತಿಳಿಸಿದ್ದಾರೆ. .

ಈ ವೇಳೆ ಕೆಫೆಯಲ್ಲಿದ್ದ  ನಾನು ಮತ್ತು ಅಭಿಷೇಕ್‌  ಹಲ್ಲೆ ಮಾಡದಂತೆ ನಲಪಾಡ್ ಬಳಿ ಮನವಿ ಮಾಡಿದೆವು. ಆದರೆ ಆತ ನಮ್ಮ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ ಎಂದು ಹೇಳಲಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು