ಬೆಂಗಳೂರು : ನಗರದ ಎರಡು ಪ್ರತ್ಯೇಕ ಪ್ರಕರಣ ಗಳಲ್ಲಿ ಯುವಕ ಸೇರಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸುಂಕದಕಟ್ಟೆಯ ಶ್ರೀನಿವಾಸ ನಗರದ ಪೈಪ್ ಲೈನ್ ರಸ್ತೆ ನಿವಾಸಿ ಸಂಜಯ್ (22) ಮೃತ ಯುವಕ. ಪಿಯುಸಿಗೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದ ಸಂಜಯ್, ಸ್ನೇಹಿತರ ಜತೆ ಅಲಿಯುತ್ತಿದ್ದ.
ಕಳೆದ ಮೂರು ದಿನಗಳಿಂದ ಮನೆಗೂ ಬಾರದೆ ಸ್ನೇಹತರ ಜತೆಯಲ್ಲಿಯೇ ಅಲೆ ದಾಡುತ್ತಿದ್ದ. ಶನಿವಾರ ಮನೆಗೆ ಬಂದಿದ್ದಾನೆ. ಆಗ ಕೋಪಗೊಂಡ ತಂದೆ-ತಾಯಿ ಹಾಗೂ ಸಂಬಂಧಿಕರು ಒಳ್ಳೆಯವರ ಸ್ನೇಹ ಮಾಡು. ಯಾವುದಾದರೂ ಕೆಲಸಕ್ಕೆ ಹೋಗುವಂತೆ ಬೈದಿದ್ದಾರೆ. ಅದಕ್ಕೆ ಬೇಸರಗೊಂಡ ಸಂಜಯ್, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾಮಾಕ್ಷಿ ಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.