ಬೆಂಗಳೂರು: ರಾಜ್ಯಾದ್ಯಂತ 20 ಕ್ಷೇತ್ರಗಳಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಡಿಸೆಂಬರ್ 10ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್ ಚುನಾವಣಾ ವೀಕ್ಷಕರನ್ನು ನೇಮಿಸಿದೆ.
ತುಮಕೂರು – ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಮತ್ತು ಶಾಸಕ ರಿಜ್ವಾನ್ ಅರ್ಷದ್, ಹಾಸನ – ಸಂಸದ ಡಿ.ಕೆ. ಸುರೇಶ್, ಕೋಲಾರ – ಎಂಎಲ್ಸಿ ಬಿ.ಕೆ. ಹರಿಪ್ರಸಾದ್, ಚಿಕ್ಕಮಗಳೂರು – ಶಾಸಕ ಕೆ.ಜೆ. ಜಾರ್ಜ್, ಬೆಳಗಾವಿ – ಶಾಸಕ ಎನ್.ಎ. ಹ್ಯಾರಿಸ್, ಚಿಕ್ಕಬಳ್ಳಾಪುರ – ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್, ಚಿಕ್ಕೋಡಿ – ಮಾಜಿ ಎಂಎಲ್ಸಿ ಐವನ್ ಡಿಸೋಜ, ಬಳ್ಳಾರಿ – ಎಂಎಲ್ಸಿ ಪಿ.ಆರ್. ರಮೇಶ್, ಬೀದರ್ – ಮಾಜಿ ಸಂಸದ ಶಿವರಾಮೇಗೌಡ, ದಾವಣಗೆರೆ – ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಚಿತ್ರದುರ್ಗ – ಮಾಜಿ ಸಚಿವ ಎಚ್.ಎಂ. ರೇವಣ್ಣ ಮತ್ತು ಕೊಡಗು – ಮಾಜಿ ಶಾಸಕ ವಾಸು ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ.
ನಿಯೋಜಿತ ವೀಕ್ಷಕರು ತಮಗೆ ವಹಿಸಲಾದ ಕ್ಷೇತ್ರಕ್ಕೆ ತೆರಳಿ ಚುನಾವಣೆಗೆ ಸಂಬಂಧಿಸಿದಂತೆ ಸ್ಥಳೀಯವಾಗಿ ಏನಾದರೂ ಸಮಸ್ಯೆಗಳಿದ್ದರೆ, ಪರಿಹರಿಸಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮಾಡಬೇಕು. ಪಕ್ಷದ ಅಧಿಕೃತ ಅಭ್ಯರ್ಥಿಯು ಅತೀ ಹೆಚ್ಚಿನ ಮತಗಳ ಅಂತರದಿಂದ ಜಯಗಳಿಸುವಂತೆ ಎಲ್ಲ ರೀತಿಯಿಂದ ಪ್ರಯತ್ನಿಸಲು ಸೂಚಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.