ಬೆಂಗಳೂರು: ಕೋರೊನಾ ಸೋಂಕಿತರ ಸಂಖ್ಯೆಯು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕೇರಳ ಮತ್ತು ಮಹಾರಾಷ್ಟ್ರದ ಬಳಿಕ ಈಗ ಪಂಜಾಬ್ ನಿಂದ ಬರುವ ಪ್ರವಾಸಿಗರಿಗೆ ಆರ್ ಟಿಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಿದೆ.
ಪರೀಕ್ಷೆಯ ವರದಿಯು 72 ಗಂಟೆಗಿಂತ ಹಳೆಯದಾಗಿರಬಾರದು ಎಂದು ಈ ಬಗ್ಗೆ ಸೋಮವಾರ ರಾಜ್ಯ ಸರ್ಕಾರವು ಆದೇಶ ಜಾರಿ ಮಾಡಿದೆ.
ಮಾರ್ಚ್ 25 ಗುರುವಾರ ಬೆಳಗ್ಗೆ 6 ಗಂಟೆಯಿಂದ ಈ ಆದೇಶವು ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಕುಟುಂಬ ಸದಸ್ಯರ ಸಾವು ಮತ್ತು ವೈದ್ಯಕೀಯ ತುರ್ತು ಅವಶ್ಯಕತೆಯನ್ನು ಇದರಿಂದ ಹೊರಗಿಡಲಾಗಿದೆ ಎಂದು ಅಧಿಕಾರಿಗಳು ಹೇಳಿರುವರು.
ಮಹಾರಾಷ್ಟ್ರದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆಯು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೆಎಸ್ ಆರ್ ಟಿಸಿ 270 ಬಸ್ ಗಳನ್ನು ರದ್ದು ಮಾಡಿದೆ.