ಬೆಂಗಳೂರು: ಗೊಂದಲ ಹಾಗೂ ವಿರೋಧದ ಕಾರಣಗಳಿಂದ ರಾಜ್ಯ ಸರಕಾರ ಘೋಷಿಸಿದ್ದ ನೈಟ್ ಕರ್ಫ್ಯೂ ವನ್ನು ಹಿಂಪಡೆದು, ಜನರ ಸ್ವಯಂ ಜಾಗ್ರತೆ ವಹಿಸುವಂತೆ ಸೂಚಿಸಿದೆ.
ಇಂದಿನಿಂದ ರಾತ್ರಿ 11ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಒಂಬತ್ತು ದಿನಗಳ ಕಾಲ ಹಾಕಲಾಗಿದ್ದ ನೈಟ್ ಕರ್ಫ್ಯೂ ಅನ್ನು ಸರ್ಕಾರ ಹಿಂಪಡೆದಿದೆ. ಅಷ್ಟೇ ಅಲ್ಲದೆ ಜನರಿಗೆ ಸ್ವಯಂ ಜಾಗೃತರಾಗಿರುವಂತೆ ಸೂಚಿಸಿದೆ.
ರೂಪಾಂತರ ಹೊಂದಿ ಹರಡುತ್ತಿರುವ ಹೊಸ ಕೋರೋನ ವೈರಸ್ ಹರಡುವಿಕೆಯನ್ನು ತಡೆಯಲು ತಜ್ಞರು ರಾತ್ರಿ ಕರ್ಫ್ಯೂವನ್ನು ತರಲು ಸಲಹೆ ನೀಡಿದರು ಎಂದು ಹೇಳುತ್ತಿರುವ ಸರ್ಕಾರ ಇದೀಗ ವಿರೋಧಗಳು ಹಾಗೂ ಟೀಕೆಗಳ ಕಾರಣದಿಂದ ತೀರ್ಮಾನವನ್ನು ಹಿಂಪಡೆದು ಮತ್ತೆ ಎಲ್ಲರ ನಗೆಪಾಟಲಿಗೆ ಕಾರಣವಾಗಿದೆ.