ನಾವು ಮಾತನಾಡುವುದಿಲ್ಲ ನಮ್ಮ ಆಕ್ಷನ್ ಮಾತನಾಡುತ್ತದೆ. ನಾವು ಮಾತನಾಡಬಾರದು ನಮ್ಮ ಕೆಲಸ ಮಾತನಾಡಬೇಕು, ನಮಗೆ ವಿಪಕ್ಷಗಳಿಂದ ಕಲಿಯಬೇಕಾದ್ದು ಏನು ಇಲ್ಲ, ಯಾವ ಸಂದರ್ಭದಲ್ಲಿ ಏನು ನಿರ್ಧಾರ ಏನು ಕ್ರಮ ಕೈಗೊಳ್ಳಬೇಕು ನಮಗೆ ಗೊತ್ತಿದೆ ಎಂದು ಸಿದ್ದರಾಮಯ್ಯನವರ ಟೀಕೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ತಿರುಗೇಟು ನೀಡಿದರು.
ಅವರು ಸೋಮವಾರ ಉಡುಪಿ ನಗರದ ಆದಿ ಉಡುಪಿ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದರು. ಸಿದ್ದರಾಮಯ್ಯ ಕಾಲದಲ್ಲಿ ಹತ್ತು ಹಲವು ಕೊಲೆಗಳ ಆಯ್ತು, ಹಿಂದು ಕಾರ್ಯಕರ್ತರ ಕೊಲೆ ನಡೆದಿದೆ, ಕೊಲೆ ಮಾಡಿದವರ ಕೇಸನ್ನೇ ವಿಡ್ರೋ ಮಾಡಿ ಕೊಂಡಿದ್ದಾರೆ ಆಗ ಸಿದ್ದರಾಮಯ್ಯ ಬುದ್ಧಿ ಕಳೆದುಕೊಂಡಿದ್ದರಾ? ಎಂದು ಸಿಎಂ ಪ್ರಶ್ನಿಸಿದರು.
ಹಲವಾರು ಕೊಲೆಗಳಿಗೆ ಸಂಬಂಧಿಸಿದ ಕೇಸು ವಿದ್ ಡ್ರಾ ಮಾಡಿದವರು, ಆರೋಪವಿರುವ ಸಂಸ್ಥೆಗಳನ್ನು, ಅದರ ಜನಗಳನ್ನು ನೇರವಾಗಿ ಸರ್ಕಾರದ ಮಟ್ಟದಲ್ಲಿ ಕೈಬಿಟ್ಟಿದ್ದಾರೆ ಹಲವಾರು ಜನರ ಕೇಸುಗಳನ್ನು ಇವರು ಕೈಬಿಟ್ಟಿದ್ದಾರೆ. ನಿಮ್ಮ ಕರ್ತವ್ಯಪ್ರಜ್ಞೆ ಆವಾಗ ಎಲ್ಲಿತ್ತು?,ನಿಮ್ಮಿಂದ ಪಾಠ ಕಲಿಯಬೇಕಾದ್ದು ನಾವು ಏನು ಇಲ್ಲ, ನಮ್ಮ ರಾಜ್ಯದ ಶಾಂತಿ-ಸುವ್ಯವಸ್ಥೆ ನಮ್ಮ ರಾಜ್ಯದ ಪ್ರಗತಿ ನಮಗೆ ಗೊತ್ತಿದೆ. ನಾವು ಕೆಲಸ ಮಾಡುತ್ತಿದ್ದೇವೆ ನಾವು ಏನು ಮಾಡಿದ್ದೇವೆ ಅಂತ ತೋರಿಸುತ್ತಿದ್ದೇವೆ ಎಂದರು
ಪ್ರಸಕ್ತ ವಿದ್ಯಮಾನಗಳ ಬಗ್ಗೆ ಯಾರು ಏನೇ ವಿಶ್ಲೇಷಣೆ ಮಾಡಿದರೂ, ನಾವು ಸಂವಿಧಾನಬದ್ಧವಾಗಿ ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡುತ್ತೇವೆ, ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ಈ ದೃಷ್ಟಿಕೋನ ಇಟ್ಟುಕೊಂಡು ನಾವು ಕೆಲಸ ಮಾಡುತ್ತಿದ್ದೇವೆಅವರವರ ವಿಚಾರ ಪ್ರಚಾರ ಮಾಡಲು ಏನೂ ತೊಂದರೆ ಇಲ್ಲ, ಆದರೆ ಕಾನೂನು ಕೈಗೆ ತೆಗೆದುಕೊಳ್ಳಬಾರದು, ಹಿಂಸೆಗೆ ಇಳಿದರೇ ಸರಕಾರ ಸಹಿಸುವುದಿಲ್ಲ.ಈ ಸ್ಪಷ್ಟ ಸಂದೇಶ ಈಗಾಗಲೇ ಕಳುಹಿಸಿದ್ದೇನೆ ಎಂದರು.
ಲವ್ ಜಿಹಾದ್ ತಡೆಯಲು ಹಿಂದು ಟಾಸ್ಕ್ ಪೋರ್ಸ್ ರಚನೆಯಾದ ಕುರಿತಾಗಿ ಪ್ರತಿಕ್ರಿಯಿಸಿದ ಸಿಎಂ, ಯಾರ್ಯಾರು ಅವರವರ ರಕ್ಷಣೆ ಮಾಡಿಕೊಳ್ಳಬೇಕೋ ಮಾಡಿಕೊಳ್ಳುತ್ತಾರೆ, ಆದರೆ ಎಲ್ಲದಕ್ಕೂ ಕಾನೂನು ಇದೆ, ಇಷ್ಟೆಲ್ಲಾ ಘಟನೆ ನಡೆದವಲ್ಲ, ಎಲ್ಲದಕ್ಕೂ ಕಾನೂನು ಇದೆ. ಕೆಲವೊಂದು ಕಾನೂನುಗಳನ್ನು ಹಿಂದಿನ ಸರಕಾರವೇ ಮಾಡಿದೆ. ನಾವೇನು ಹೊಸದಾಗಿ ಕಾನೂನು ಮಾಡಿಲ್ಲ, ಹಿಂದಿನ ಸರಕಾರಗಳು ಮಾಡಿದ ಕಾನೂನು ಪ್ರಕಾರವೇ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿದರು.