ಬೆಂಗಳೂರು: ನಮ್ಮ ರಾಷ್ಟ್ರ ಧ್ವಜದಲ್ಲೇ ಕೇಸರಿ ಇದೆ. ಕೇಸರಿ ನಿಷೇಧಿತ ಬಣ್ಣ ಅಲ್ಲ. ಕಾಂಗ್ರೆಸ್ ನಾಯಕರು ಹೆಡ್ಗೆವಾರ್ ಬಗ್ಗೆ ತಿಳಿದುಕೊಂಡು ಮಾತನಾಡಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಕೂಪ ಮಂಡೂಕರಲ್ಲ ಅಂತ ಭಾವಿಸಿದ್ದೇನೆ. ಹೆಡ್ಗೆವಾರ್ ಕಬಡ್ಡಿ ಮೂಲಕವೇ ದೇಶವನ್ನು ಸಂಘಟಿಸಿದವರು. ಸ್ವತಃ ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾಗಿದ್ದರು ಎಂದರು.
ಹೆಡ್ಗೆವಾರ್ ಕಾಂಗ್ರೆಸ್ನಲ್ಲೂ ಸಕ್ರಿಯರಾಗಿದ್ದರು. ಅನಂತರ ಅಲ್ಲಿಂದ ಹೊರ ಬಂದು ಆರೆಸ್ಸೆಸ್ ಅನ್ನು ರಚಿಸಿದರು. ಆರೆಸ್ಸೆಸ್ಗೆ ಪಥ ಸಂಚಲನ ಮಾಡಲು ನೆಹರೂ ಅವಕಾಶ ನೀಡಿದ್ದರು ಎಂದು ರವಿ ಹೇಳಿದರು.