ಬೆಂಗಳೂರು : ಪೊಲೀಸರಿಂದ ನನಗೆ ಅನ್ಯಾಯವಾಗಿದೆ ಎಂದು ಅಳಲು ತೋಡಿಕೊಂಡ ವೃದ್ಧರೊಬ್ಬರು ಸಿಎಂ ಬಸವರಾಜ್ ಬೊಮ್ಮಾಯಿ ಎದುರೇ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಿಎಂ ನಿವಾಸ ಆರ್.ಟಿ.ನಗರದಲ್ಲಿ ನಡೆದಿದೆ.
ಪೊಲೀಸರಿಂದ ಅನ್ಯಾಯವಾಗಿದೆ, ನನಗೆ ನ್ಯಾಯ ಕೊಡಿಸಿ ಎಂದು ಸಿಎಂ ಬಳಿ ಕಣ್ಣೀರಿಟ್ಟ ವೃದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆ ಇನ್ಸ್ ಪೆಕ್ಟರ್ ವಿರುದ್ಧ ಆರೋಪ ಮಾಡಿದ್ದಾರೆ.
ಸೈಟ್ ವಿಚಾರಕ್ಕೆ ಕೆಲವರೊಂದಿಗೆ ಸೇರಿ ಪೊಲೀಸರು ತನಗೆ ಮೋಸ ಮಾಡಿದ್ದಾರೆ. ಹಲವು ಬಾರಿ ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ನ್ಯಾಯ ಸಿಕ್ಕಿಲ್ಲ ಎಂದಿರುವ ವೃದ್ಧ ತನ್ನ ಬಳಿ ಇದ್ದ ದ್ರಾವಣದ ಬಾಟಲ್ ತೆಗೆದು ಮುಖ್ಯಮಂತ್ರಿಗಳಿಗೆ ತೋರಿಸಿ ಅದನ್ನು ಸೇವಿಸಲು ಮುಂದಾಗಿದ್ದಾರೆ.
ತಕ್ಷಣ ತಡೆದ ಪೊಲೀಸರು ವೃದ್ಧರನ್ನು ಪಕ್ಕಕ್ಕೆ ಕರೆದೊಯ್ದು ಮಾಹಿತಿ ಪಡೆದುಕೊಂಡಿದ್ದಾರೆ.