ಬೆಂಗಳೂರು: ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆಯ ನೋಂದಾಯಿತ ಸಂಘವಾದ ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟವು ಮಂಡ್ಯ ಸಂಸ್ಥೆಯ ಸಹಯೋಗದಲ್ಲಿ ಇದೇ ಪ್ರಥಮಬಾರಿಗೆ ಅಖಿಲ ಭಾರತ ಆಹ್ವಾನಿತ ಪುರುಷರ ಖೋ-ಖೋ ಪಂದ್ಯಾವಳಿಯನ್ನು ದಿ. ಕೆ.ಎಸ್. ಪುಟ್ಟಣ್ಣಯ್ಯ ಮಾಜಿ ಶಾಸಕರು, ಮೇಲುಕೋಟೆ ಇವರ ಸ್ಮರಣಾರ್ಥ ಜೂ.2 ರಿಂದ 5ರವರೆಗೆ ನಡೆಸುತ್ತಿದೆ.
ಈ ಕುರಿತಂತೆ ಬೆಂಗಳೂರು ಪ್ರೆಸ್ ಕ್ಲಬ್ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಖೋ-ಖೋ ಸಂಸ್ಥೆಯ ಅಧ್ಯಕ್ಷ ಲೋಕೇಶ್ವರ, ಗೌರವ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ಮತ್ತಿತರರು ಪಂದ್ಯಾವಳಿಯ ಕುರಿತಂತೆ ಮಾಹಿತಿ ನೀಡಿದರು.
1994ರಲ್ಲಿ ದಿ. ಕೆ.ಎಸ್. ಪುಟ್ಟಣ್ಣಯ್ಯ ರೈತ ಮುಖಂಡರು ಹಾಗೂ ಸ್ವತಃ ಕಬ್ಬಡಿ ಪಟು ಇವರು ಸಂಸ್ಥಾಪಕ ಪೋ?ಕತ್ವದಿಂದ ಸ್ಥಾಪಿಸಿ ಅದನ್ನು ಅತಿ ಶ್ರದ್ಧೆಯಿಂದ ಬೆಳೆಸಿಕೊಂಡು ಬಂದಿದ್ದು, ಅದರ ಪರಿಣಾಮ ಖ್ಯಾತನ ಹಳ್ಳಿಯಲ್ಲಿ ಖೋ-ಖೋ ಅಲ್ಲದೇ ಕಬ್ಬಡಿ ಅಥ್ಲೆಟಿಕ್ಸ್, ಬಾಲ್ ಬ್ಯಾಡ್ಮಿಂಟನ್ ಮತ್ತು ಟೆನ್ನಿಕಾ ಮುಂತಾದ ಕ್ರೀಡೆಗಳಲ್ಲಿ ಆಟಗಾರರು ರಾಷ್ಟ್ರೀಯ ಮಟ್ಟವನ್ನು ತಲುಪಿ ಸಾಧನೆ ಮಾಡಿದ್ದಾರೆ. ಖೋ-ಖೋ ಕ್ರೀಡೆಯಲ್ಲಿ ರಾಷ್ಟ್ರೀಯ ಉತ್ತಮ ಆಟಗಾರ ಪ್ರಶಸ್ತಿ (ಜಾನಕಿ ಮತ್ತು ಇಳಾ) ಹಾಗೂ ದಕ್ಷಿಣ ವಲಯ ಪ್ರಶಸ್ತಿ (ಮದಕರಿ ನಾಯಕ) ಗಳಿಸಿರುತ್ತಾರೆ. ಅಲ್ಲದೆ ರಾಜ್ಯ ಸರ್ಕಾರದ ಏಕಲವ್ಯ ಪ್ರಶಸ್ತಿ ಪಡೆದಿದ್ದಾರೆ.
ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟವು ಸ್ವಂತ ಕಟ್ಟಡ ಹೊಂದಿರುವ ರಾಜ್ಯದ ಏಕೈಕ ಸಂಘವಾಗಿದೆ. ಅದಕ್ಕಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಸಂಘವನ್ನು ಗುರುತಿಸಿ ವಿಶೇಷ ಸವಲತ್ತುಗಳನ್ನು ನೀಡುತ್ತಿದೆ ಎಂದರು.
ವಿಶ್ವೇಶ್ವರಯ್ಯ ಕ್ರೀಡಾಂಗಣ ಕ್ಯಾತನಹಳ್ಳಿ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ. ಖೋ ಖೋ ನಡೆಯುತ್ತಿದ್ದು, ಆಟಗಾರರಿಗೆ ವಸತಿ ಮತ್ತು ಊಟದ ವ್ಯವಸ್ಥೆ ಪಾಂಡವಪುರ ಮತ್ತು ಶ್ರೀರಂಗಪಟ್ಟಣದಲ್ಲಿಯ ಹೋಟೆಲ್ ವಸತಿ ವ್ಯವಸ್ಥೆ ಮಾಡಲಾಗಿದೆ
ಖೋ-ಖೋ ಫೆಡರೇಷನ್ ಆಫ್ ಇಂಡಿಯಾ ನಿಯಮಾನುಸಾರ ಲೀಗ್ ಮಾದರಿಯಲ್ಲಿ ಪಂದ್ಯಗಳನ್ನು ಖೋ-ಖೋ ಮ್ಯಾಟ್ ಮೇಲೆ ಆಡಿಸಲಾಗುವುದು. ವಿಜೇತರಿಗೆ ಪ್ರಥಮ ರೂ.1ಲಕ್ಷ ದ್ವಿತೀಯ 50 ಸಾವಿರ, ತೃತೀಯ 30 ಸಾವಿರ, 4ನೇ ಸ್ಥಾನ ರೂ.20ಸಾವಿರ, ಜೊತೆಗೆ ಪಾರಿತೋಷಕ ನೀಡಲಾಗುತ್ತದೆ. ಇದರೊಂದಿಗೆ ಉತ್ತರ ದಾಳಿಗಾರ, ರಕ್ಷಣೆಗಾರ ಹಾಗೂ ಸವಾಂಗೀಣ ಆಟಗಾರರಿಗೆ ತಲಾ ರೂ.5 ಸಾವಿರ ರೂ. ಗಳನ್ನು ನೀಡಲಾಗುತ್ತದೆ. ಪಂದ್ಯಾವಳಿ ಜೂನ್ 2 ರಂದು ಸಂಜೆ ಉದ್ಘಾಟನೆಯಾಗಲಿದೆ. ಜೂನ್ 5 ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ಎಂದು ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟದ ಕ್ರೀಡಾ ಅಧ್ಯಕ್ಷ ಮುರಳಿಧರ ಮತ್ತಿರರು ಉಪಸ್ಥಿತರಿದ್ದರು.