News Karnataka Kannada
Monday, April 29 2024
ಬೆಂಗಳೂರು ನಗರ

ದಾವೋಸ್‌ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಸರಿಸಿದ ಕೊಡಗಿನ ಕಾಫಿಯ ಕಂಪು

Cm
Photo Credit : Twitter

ಬೆಂಗಳೂರು,ಮೇ.28: ಸ್ವಿಡ್ಜರ್‌ ಲೆಂಡ್‌ ನ ದಾವೋಸ್‌ನಲ್ಲಿ ಮೇ 22 ರಿಂದ 26 ರ ವರೆಗೆ ನಡೆದ ವಿಶ್ವ ಆರ್ಥಿಕ ವೇದಿಕೆ (World economic forum ) ಯ ಹೂಡಿಕೆ ಸಮಾವೇಶದಲ್ಲಿ ಭಾಗವಹಿಸಿದ್ದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯಕ್ಕೆ 52 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಹೂಡಿಕೆ ಹರಿದು ಬರಲಿದೆ ಎಂದು ಹೇಳಿದ್ದಾರೆ.

ದಾವೋಸ್‌ ನಿಂದ ಹಿಂತಿರುಗಿದ ಕೂಡಲೇ ಶುಕ್ರವಾರ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ದಾವೋಸ್‌ ಭೇಟಿ ಯಶಸ್ವಿಯಾಗಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ವಿದೇಶೀ ಹೂಡಿಕೆ ಹರಿದುಬರಲಿದೆ ಎಂದು ಹೇಳಿದರು. ಈ ಹೂಡಿಕೆದಾರರ ಸಭೆಯ ಮತ್ತೊಂದು ವಿಶೇಷವೇನೆಂದರೆ ಕರ್ನಾಟಕ ರಾಜ್ಯ ಸರ್ಕಾರಕ್ಕೆ ನಿಗದಿಪಡಿಸಲಾಗಿದ್ದ ಸಭಾಂಗಣದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ ಹೂಡಿಕೆದಾರರಿಗೂ ಕುಡಿಯಲು ಕಾಫಿಯನ್ನು ನೀಡಿ ಕಾಫಿಯ ಪರಿಮಳ, ಸ್ವಾದವನ್ನು  ಪರಿಚಯಿಸಲಾಗಿದೆ.

ಅಷ್ಟೇ ಅಲ್ಲ ಪ್ರತಿಯೊಬ್ಬರಿಗೂ ನೆನಪಿಗಾಗಿ ಕಾಫಿ ಪುಡಿಯ ಪೊಟ್ಟಣಗಳನ್ನೂ ನೀಡಿ ಸತ್ಕರಿಸಲಾಗಿದೆ. ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಬೆಳೆದ ರೊಬಸ್ಟಾ ಮತ್ತು ಅರೇಬಿಕಾ ತಳಿಯ ಕಾಫಿ ಪುಡಿಯ ಜತೆಗೇ ಕಾಫಿ ಕುರಿತ ಕರಪತ್ರವನ್ನು ಭೇಟಿ ನೀಡಿದ ಪ್ರತಿಯೊಬ್ಬ ಸಂದರ್ಶಕನಿಗೂ ನೀಡಲಾಗಿದೆ. ಕರಪತ್ರದಲ್ಲಿ ಕರ್ನಾಟಕವು ಭಾರತದ ಕಾಫಿ ಕೇಂದ್ರವಾಗಿದ್ದು ಒಟ್ಟು ಐದು ಜಿಐ (Geographical Indication) ಟ್ಯಾಗ್‌ ಹೊಂದಿರುವ ಕಾಫಿ ಮಾದರಿಗಳಿಗೆ ನೆಲೆಯಾಗಿದೆ. ಮಾನ್ಸೂನ್ಡ್ ಮಲಬಾರ್ ಅರೇಬಿಕಾ , ರೋಬಸ್ಟಾ ಕಾಫಿ ಜೊತೆಗೆ, ಚಿಕ್ಕಮಗಳೂರು ಅರೇಬಿಕಾ ಮತ್ತು ಕೂರ್ಗ್ ಅರೇಬಿಕಾ ಕಾಫಿ ಯು ಜಿಐ ಟ್ಯಾಗ್‌ ಹೊಂದಿದ್ದು ವಿಶ್ವಾದ್ಯಂತ ಜನಪ್ರಿಯವಾಗಿವೆ ಎಂದು ಹೇಳಿದೆ.

ಇದರಿಂದಾಗಿ ಹೂಡಿಕೆದಾರರು ಕಾಫಿಯ ಬಗ್ಗೆ ಆಸಕ್ತಿ ತಳೆಯುವುದೇ ಅಲ್ಲದೆ ಕಾಫಿಯ ಬಳಕೆ ಕಡಿಮೆ ಇರುವ ದೇಶಗಳಲ್ಲಿ ಕಾಫಿಯನ್ನು ಪರಿಚಯಿಸಲು ಆ ಮೂಲಕ ಉದ್ಯಮದಲ್ಲಿ ಹೂಡಿಕೆಗೂ ಮುಂದಾಗುವ ಸಾದ್ಯತೆ ಇದೆ. ಎಲ್ಲೆಡೆ ವ್ಯಾಪಕವಾಗಿ ಬಳಕೆಯಲ್ಲಿರುವ ಟೀ ಬದಲಿಗೆ ಸಮಾವೇಶದಲ್ಲಿ ಕಾಫಿಯನ್ನು ಪರಿಚಯಿಸಿದ್ದಕ್ಕಾಗಿ ಕಾಫಿ ಉದ್ದಿಮೆಯ ರಫ್ತುದಾರ , ಬೆಳೆಗಾರ ಮತ್ತು ವ್ಯಾಪಾರ ಸಂಘಟನೆಗಳು ಮೆಚ್ಚುಗೆ ವ್ಯಕ್ತಪಡಿಸಿವೆ.

ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಉತ್ಪಾದಿಸಲಾದ ಉತ್ಪಾದನೆಗೆ ಜಿಐ ಟ್ಯಾಗ್‌ ನೀಡಲಾಗುತಿದ್ದು ಇದರಿಂದ ಆ ನಿರ್ದಿಷ್ಟ ಉತ್ಪನ್ನ ತನ್ನ ಗುಣಮಟ್ಟ ಹಾಗೂ ವಿಶಿಷ್ಟತೆಯಿಂದ ಜಾಗತಿಕವಾಗಿ ಗುರುತಿಸಿಕೊಳ್ಳಲು ಮತ್ತು ಮಾರುಕಟ್ಟೆ ಪಡೆದುಕೊಳ್ಳಲು ಅನುಕೂಲವಾಗುತ್ತಿದೆ. ಭಾರತದ ಕಾಫಿಯು ಜಾಗತಿಕವಾಗಿ ಗುಣಮಟ್ಟಕ್ಕೆ ಹೆಸರುವಾಸಿ ಆಗಿದ್ದು ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿ ಪ್ರೀಮಿಯಂ ದರದಲ್ಲಿ ಮಾರಾಟವಾಗುತ್ತಿದೆ. ಈಗಾಗಲೇ ಡಾರ್ಜಲಿಂಗ್‌ ಟೀ, ತಿರುಪತಿ  ಲಡ್ಡು, ನಾಗಪುರದ ಕಿತ್ತಳೆ ಇನ್ನೂ ಅನೇಕ ಉತ್ಪನ್ನಗಳು ಜಿಐ ಟ್ಯಾಗ್‌ ಪಡೆದುಕೊಂಡಿವೆ.

ಒಂದು ಬಾರಿ ಜಿಐ ಟ್ಯಾಗ್‌ ನೀಡಿದ ಮೇಲೆ ಬೇರೊಬ್ಬ ವ್ಯಕ್ತಿ ಅಥವಾ ಸಂಸ್ಥೆ ಇದೇ ವಸ್ತುಗಳನ್ನು ಅದೇ ಹೆಸರು ಬಳಸಿ ನಕಲು ಮಾಡಲು ಕಾನೂನಿನಲ್ಲಿ ಆಸ್ಪದ ಇಲ್ಲ. ಇದು ಮೂಲ ಉತ್ಪಾದಕರಿಗೆ ನಕಲಿ ನಿಂದ ರಕ್ಷಣೆ ನೀಡುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು