News Karnataka Kannada
Sunday, May 05 2024
ಬೆಂಗಳೂರು ನಗರ

ಟಿಬೆಟ್ ನ ರಾಷ್ಟ್ರೀಯ ಸಾರ್ವಭೌಮತ್ವ ಮರು ಸ್ಥಾಪನೆಗೆ ಹೋರಾಟ

Tibet
Photo Credit : News Kannada

  ಬೆಂಗಳೂರು: ಚೀನಾದ ಅಕ್ರಮವಾಗಿ ಟಿಬೆಟ್ ನ್ನು ವಶಪಡಿಸಿಕೊಂಡ ವೇಳೆ ನಿರಾಶ್ರಿತರಾಗಿ ಭಾರತದ ವಿವಿಧೆಡೆ ಬದುಕು  ಕಟ್ಟಿಕೊಂಡಿರು ಟಿಬೆಟಿಯನ್ನಿಯರು ಪ್ರತಿ ವರ್ಷ ಮಾರ್ಚ್ 10 ರಂದು ಜಗತ್ತಿನಾದ್ಯಂತ ಟಿಬೆಟಿಯನ್ 63 ನೇ ಸ್ಮರಣಾರ್ಥವನ್ನು ಆಚರಿಸುತ್ತಾ ಬಂದಿದ್ದಾರೆ. ಯಾವತ್ತಾದರೂ ಒಂದು ದಿನ ಟಿಬೆಟ್ ಮರು ಸ್ಥಾಪನೆ ಮಾಡಲೇ ಬೇಕೆಂಬುದು ಅವರ ಅಚಲ  ನಿರ್ಧಾರವಾಗಿದೆ.

ಟಿಬೆಟ್ ನ ರಾಷ್ಟ್ರೀಯ ಸಾರ್ವಭೌಮತ್ವವನ್ನು ಮರು ಸ್ಥಾಪಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ದೇಶಭಕ್ತ ಟಿಬೆಟಿಯನ್ ಪುರುಷರು ಮತ್ತು ಮಹಿಳೆಯರನ್ನು ಅವರನ್ನು ಸ್ಮರಿಸಿ ಗೌರವಿಸುತ್ತಾರೆ. ಈ ನಿಟ್ಟಿನಲ್ಲಿ ಟಿಬೆಟಿಯನ್ ಯುವ ಕಾಂಗ್ರೆಸ್  ಪ್ರತಿವರ್ಷವೂ  ಬದುಕುಳಿದಿರುವ ಕುಟುಂಬದ ಸದಸ್ಯರು ಮತ್ತು ಅವರ ಸಂಬಂಧಿಕರು ಮತ್ತು ಚೀನೀ ಆಕ್ರಮಣವನ್ನು ವಿರೋಧಿಸುತ್ತಾ ಬಂದಿರುವುದನ್ನು ಕಾಣಬಹುದಾಗಿದೆ

1949ರಲ್ಲಿ ಟಿಬೆಟ್ ಮೇಲೆ ಬಲವಂತದ ಆಕ್ರಮಣ ಆರಂಭಿಸಿ 10 ಮಾರ್ಚ್ 1959 ರಂದು ಆಕ್ರಮಿಸಿಕೊಳ್ಳಲಾಯಿತು.  ಅಲ್ಲಿಂದ ಹೊರ  ಬಂದ  ಟಿಬೆಟಿಯನ್ನರು  ಆ ದಿನವನ್ನು ಎಂದಿಗೂ ಮರೆಯುವುದಿಲ್ಲ. ಅಂದು ಟಿಬೆಟಿಯನ್ ದಂಗೆ ನಡೆದು,                      “ಮೇ ಹಿಸ್ ಹೂಲಿನ ದಲೈ ಲಾಮಾ ಸಾವಿರಾರು ವರ್ಷಗಳ ಕಾಲ ಬದುಕುತ್ತಾರೆ!”, “ಟಿಬೆಟ್ ಸ್ವತಂತ್ರ ದೇಶ!” ಮತ್ತು “ಚೀನಾ, ಟಿಬೆಟ್ ತೊರೆಯಿರಿ!” ಎಂಬ ಮೂರು ಘೋಷಣೆಯೊಂದಿಗೆ ಹೋರಾಟ ನಡೆಸಿಕೊಂಡು ಬರುತ್ತಿದ್ದಾರೆ.

1959 ರಿಂದ  ಕಮ್ಯುನಿಸ್ಟ್ ಚೀನಾ ಟಿಬೆಟಿಯನ್ ಜನರ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರವನ್ನು ಕಸಿದುಕೊಂಡಿತು  ಮತ್ತು ಕಟ್ಟುನಿಟ್ಟಿನ ಕಣಾವಲಿಗೆ ಒಳಪಡಿಸಲಾಯಿತು. ಇಂತಹ ದಬ್ಬಾಳಿಕೆಯ ನೀತಿಗಳಿಂದಾಗಿ ಟಿಬೆಟಿಯನ್ನರು ಚೀನಾದ ಅಕ್ರಮ ಆಕ್ರಮಣದ ವಿರುದ್ದ ಪ್ರತಿಭಟಿಸಲು ಸ್ವಯಂ ದಹನದಂತಹ ಕ್ರಮಗಳನ್ನು ಆಶ್ರಯಿಸಿದ್ದಾರೆ. ಇಲ್ಲಿಯವರೆಗೆ 168 ಟಿಬೆಟಿಯನ್ನರು ಬೆಂಕಿ ಹಚ್ಚಿಕೊಂಡಿದ್ದಾರೆ. 25ಫೆಬ್ರವರಿ 2022 ರಂದು, 25ವರ್ಷ ವಯಸ್ಸಿನ ಟಿಬೆಟಿಯನ್ ಕಲಾವಿದ,  ತೈವಾಂಗ್ ನಾರ್ಬು ಅವರು ಚೀನಾದ ವಿರುದ್ಧ ಪ್ರತಿಭಟಿಸಲು ಲಾಸಾದ ಪೊಟಾಲಾ ಅರಮನೆಯ ಮುಂದೆ ಬೆಂಕಿ ಹಚ್ಚಿಕೊಂಡರು.

ಇತ್ತೀಚೆಗೆ, ಚೀನಾ 2022 ರ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್ ಅನ್ನು ಆಯೋಜಿಸಿದಾಗ, ಟಿಬೆಟ್ ವೊಳಗೆ ಟಿಬೆಟಿಯನ್ನರ ಮೇಲೆ ಭಾರೀ ನಿರ್ಬಂಧಗಳನ್ನು ವಿಧಿಸಲಾಯಿತು ಮತ್ತು ಟಿಬೆಟ್ ನಲ್ಲಿ ಸಾವಿರಾರು ಚೀನೀ ಪ್ರಚಾರ ಪೋಸ್ಟರ್ ಗಳು ಮತ್ತು ಪೇಂಟಿಂಗ್ ಗಳನ್ನು ಪ್ರದರ್ಶಿಸಲಾಯಿತು. ಇದಲ್ಲದೆ, ಟಿಬೆಟಿಯನ್ ಶಾಲೆಗಳನ್ನು ಮುಚ್ಚಲಾಯಿತು, ದೊಡ್ಡ ಧಾರ್ಮಿಕ ಕೂಟಗಳ ಮೇಲೆ ನಿಷೇಧವಿತ್ತು, ಅಲೆಮಾರಿಗಳನ್ನು ಅವರ ಸಾಂಪ್ರದಾಯಿಕ ತಾಯಾಡಿನಿಂದ ಪುನರ್ವಸತಿ ಮಾಡಲಾಯಿತು ಮತ್ತು ಬುದ್ಧ  ಮತ್ತು ಗುರುಗಳ ಪ್ರತಿಮೆಗಳನ್ನು ನಾಶಪಡಿಸಲಾಯಿತು. ಹೆಸರಾಂತ ಬರಹಗಾರ, ಗೋ ಶರಾಬ್ ಗ್ಯಾಟೂ ಟಿಬೆಟ್ ಬಗ್ಗೆ ಬರೆದಿದ್ದಕ್ಕಾಗಿ 10 ವರ್ಷಗಳ ಕಾಲ ಜೈಲುವಾಸ ಅನುಭವಿಸಿದರು.

ಹೀಗೆ ಚೀನಾದ ದಬ್ಬಾಳಿಕೆಯನ್ನು ಸಹಿಸಿಕೊಂಡೇ ಬಂದಿರುವ ಟಿಬೆಟಿಯನ್ನರು ತಮ್ಮ ನೆಲಕ್ಕಾಗಿ ತಾವು ಇದ್ದಲ್ಲಿಂದಲೇ  ಹೋರಾಟ ನಡೆಸುತ್ತಿದ್ದಾರೆ. ಆದರೆ ಚೀನಾಕ್ಕೆ ಅದ್ಯಾವುದು ಗೊತ್ತೇ ಆಗುತ್ತಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು