ಬೆಂಗಳೂರು : ಜೂನ್ 14ರಂದು ಮುಕ್ತಾಯಗೊಳ್ಳಲಿರಿವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ . ಮೈಸೂರು , ದಕ್ಷಿಣ ಕನ್ನಡ , ಹಾಸನ , ಬೆಂಗಳೂರು ಗ್ರಾಮಾಂತರ ಸೇರಿದಂತೆ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಯಲಿದೆ . ಉಳಿದ ಜಿಲ್ಲೆಗಳಲ್ಲಿ ಲಾಕ್ ಡೌನ್ ನಲ್ಲಿ ಸಡಿಲಿಕೆ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಇನ್ನು ಕೆಲಸ ಕಾರ್ಯಗಳ ಕುರಿತು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದ್ದು, ಎಲ್ಲ ತರದ ಕೈಗಾರಿಕೆಗಳ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ . ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ಶೇಕಡ 30 ಮಂದಿಯ ಕೆಲಸಕ್ಕೆ ಅವಕಾಶ ನೀಡಲಾಗಿದೆ . ಪಾರ್ಕ್ ಗಳಲ್ಲಿ ಜಾಗಿಂಗ್ ಗೆ ಅನುಮತಿ ನೀಡಲಾಗಿದೆ . ಆದರೆ ಯಾವುದೇ ತರದ ಗುಂಪು ಚಟುವಟಿಕೆ ನಿಷೇಧಿಸಲಾಗಿದೆ . ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಸಂಚಾರ ನಿಷೇಧಿಸಲಾಗಿದೆ .
ಮದುವೆ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದ್ದು, ಮದುವೆಯಲ್ಲಿ 40 ಮಂದಿ ಮತ್ತು ಅಂತ್ಯ ಕ್ರಿಯೆಯಲ್ಲಿ 5 ಮಂದಿಗೆ ಭಾಗವಹಿಸಲು ಅನುಮತಿ ನೀಡಲಾಗಿದೆ .