ಬೆಂಗಳೂರು : ಕೋಮು ಕದಡುವ ಹೇಳಿಕೆ ನೀಡಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಮರ್ಥನೆ ಮಾಡಿಕೊಂಡಿದ್ದಾರೆ. ವಿಕಾಸಸೌಧದಲ್ಲಿ ಮಾತನಾಡಿದ ಅವರು, ನಾನು ಕೋಮು ಕದಡುವ ಹೇಳಿಕೆ ನೀಡಿಲ್ಲ.
ಮೃತ ಚಂದ್ರು ತಾಯಿಯ ಹೇಳಿಕೆಯನ್ನ ಆಧರಿಸಿ ಮಾತನ್ನಾಡಿದ್ದೇನೆ. ಬೈಕ್ ಅಪಘಾತದಿಂದ ಡ್ಯಾಮೇಜ್ ಆಗಿಲ್ಲ ಪೆಟ್ಟು ಕೂಡ ಆಗಿಲ್ಲ. ಭಾಷೆಯೂ ಒಂದು ನೆಪವಾಗಿದೆ. ಇದರಲ್ಲಿ ಕೋಮು ಕದಡುವ ವಿಚಾರ ಎಲ್ಲಿದೆ. ಕೊಲೆ ಮಾಡುವ ಮಾನಸಿಕ ಸ್ಥಿತಿ ಯಾಕೆ ಇದೆ ಎಂದು ಪ್ರಶ್ನಿಸಿದರು.
ಸತ್ಯ ಹೇಳುವುದರಿಂದ ಕೋಮು ಯಾಕೆ ಕದಡಲಿದೆ ಎಂದು ಹೇಳಿದ ಅವರು, ಸಿದ್ದರಾಮಯ್ಯ ಹೇಳಿಕೆ ನೋಡಿದ್ರೆ ನಮ್ಮ ರಾಜ್ಯದ ಸಿಎಂ ಆಗಿದ್ರು ಅಂತ ಹೇಳೋಕೆ ಗೌರವ ಸಿಗಲ್ಲ. ಅವರು ಕಾಲ ಕಾಲಕ್ಕೆ ಸತ್ಯ ಹೇಳುವ ತಂಡವನ್ನ ಇಟ್ಟುಕೊಳ್ಳಬೇಕು. ಅರುಳೋ ಮರುಳೋ ಅನ್ನೋ ಪರಿಸ್ಥಿತಿಗೆ ಬಂದಿದ್ದಾರೆ ಅಂತ ಜನ ಮಾತಾಡಿಕೊಳ್ತಾರೆ. ಸ್ವತಃ ಆಲ್ ಜುವಾಹರಿ ಮಾತಾಡಿರೋ ವಿಡಿಯೋ ಇದೆ. ಅದನ್ನ ಮೊದಲು ಅವರು ಶಾಂತವಾಗಿ ನೋಡಬೇಕು. ಇಲ್ಲದಿದ್ರೆ ಅವರ ಸ್ಥಾನಕ್ಕೆ ತಕ್ಕಂತೆ ಮಾತನಾಡುತ್ತಿಲ್ಲ ಅನ್ನೋದು ಗೊತ್ತಾಗಲಿದೆ ಎಂದು ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.
ಬಳಿಕ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಸಿ.ಟಿ ರವಿ ಅನ್ನೋ ವಿಚಾರ ಕುರಿತು ಮಾತನಾಡಿದ ಅವರು, ನಾನು ಯಾವುದೇ ಅಕಾಂಕ್ಷಿ ಅಲ್ಲ. ನಾನು ಪಕ್ಷದ ಕಾರ್ಯಕರ್ತ. ಪಕ್ಷ ನೀಡುವ ಜವಾಬ್ದಾರಿಗೆ ನಾನು ಬದ್ಧ. ಬಿಜೆಪಿಯಲ್ಲಿ ಯಾವುದೂ ಶಾಶ್ವತ ಅಲ್ಲ. ಎಲ್ಲಾ ಬದಲಾವಣೆ ಆಗುತ್ತಿರುತ್ತೆ. ಕಾಲಕಾಲಕ್ಕೆ ಎಲ್ಲರೂ ಬದಲಾವಣೆ ಆಗುತ್ತಿರುತ್ತೆ ಎಂದು ತಿಳಿಸಿದರು.
ಇನ್ನು ಸಿಎಂ ಬದಲಾವಣೆ ವದಂತಿ ವಿಚಾರ ಕುರಿತು ಮಾತನಾಡಿದ ಅವರು, ಸಿಎಂ ಜೆ.ಪಿ ನಡ್ಡಾ ಜೊತೆ ಸಾಕಷ್ಟು ಚರ್ಚೆ ಮಾಡಿದ್ದಾರೆ. ಹಾಗಿದ್ದ ಮೇಲೆ ಬದಲಾವಣೆ ಕಪೋಲಕಲ್ಪಿತ. ಸಿಎಂ ದೆಹಲಿಗೆ ತೆರಳಿದ್ದ ವೇಳೆ ಭೇಟಿಗೆ ಅವಕಾಶ ಬಿಡಲಿಲ್ಲ ಎಂದೇನು ಇಲ್ಲ. ಅಮಿತ್ ಷಾ ರಾಜ್ಯಕ್ಕೆ ಭೇಟಿ ನಿಡಿದ್ದಾಗ ಸಿಎಂ ಜೊತೆಯೂ ಮಾತನ್ನಾಡಿದ್ದಾರೆ. ಇಡೀ ದಿನ ಸಿಎಂ ಅಮಿತ್ಷಾ ಜೊತೆಯೇ ಇದ್ದರಲ್ಲ ಎಂದು ಹೇಳಿದರು.