ಬೆಂಗಳೂರು: ಬೆಂಗಳೂರು ಈಗ ಗೂಂಡಾನಗರಿಯಾಗಿದೆ. ಕಾಂಗ್ರೆಸ್ ನೇತೃತ್ವದಲ್ಲಿ ಗೂಂಡಾರಾಜ್ ನಡೆಯುತ್ತಿದೆ. ನಿಮಗೆ ಗೂಂಡಾ ಸರ್ಕಾರ ಬೇಕೇ? ಅಥವಾ ಬಿಜೆಪಿ ನೇತೃತ್ವದ ಉತ್ತಮ ಸರಕಾರ ಬೇಕೇ ಎಂದು ಬಿಜೆಪಿಯ ರಾಜ್ಯ ಉಸ್ತುವಾರಿ ಸಚಿವ ಪ್ರಕಾಶ್ ಜಾವಡೇಕರ್ ಪ್ರಶ್ನಿಸಿದರು.
ಶುಕ್ರವಾರದಿಂದ ಬಿಜೆಪಿ ಆರಂಭಿಸಿರುವ ಕಾಂಗ್ರೆಸ್ ನಿಂದ ಬೆಂಗಳೂರು ರಕ್ಷಿಸಿ ಪಾದಯಾತ್ರೆಗೆ ಚಾಲನೆ ಬಳಿಕ ಎನ್. ಕಾಲನಿಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಬೆಂಗಳೂರನ್ನು ಕಾಂಗ್ರೆಸ್ ಸರ್ಕಾರ ಗಾರ್ಬೆಜ್ ಸಿಟಿಯನ್ನಾಗಿಸಿದೆ. ಮತ್ತೆ ಗಾರ್ಡನ್ ಸಿಟಿಯಾಗಬೇಕಾದರೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಬೆಂಗಳೂರಿನ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಗೆದ್ದುಬರುವಂತಾಬೇಕು ಎಂದು ಅವರು ತಿಳಿಸಿದರು.