ಬೆಂಗಳೂರು: ಇಡೀ ದೇಶದ ಕುತೂಹಲ ಕೆರಳಿಸಿದ್ದ ರಾಜ್ಯ ವಿಧಾನಸಭಾ ಫಲಿತಾಂಶ ಅತಂತ್ರವಾಗಿದ್ದು ಇದೀಗ ಇಡೀ ದೇಶ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ ಎಂದು ಕುತೂಹಲ ಮೂಡಿದೆ. ಒಂದೆಡೆ ಕಾಂಗ್ರೆಸ್- ಜೆಡಿಎಸ್ ಜತೆ ಮೈತ್ರಿಗೆ ಕಸರತ್ತು ನಡೆಸುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತನ್ನ ಮುಂದಿನ ನಿಲುವನ್ನು ಹೇಳದೆ ಎಲ್ಲವನ್ನು ಹೈಕಮಾಂಡ್ ಗೆ ಬಿಟ್ಟಿದ್ದೇನೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಇನ್ನೂ ಫಲಿತಾಂಶ ಹೊರಬೀಳುತ್ತಿದ್ದಂತ್ತೆ ಕುಮಾರಸ್ವಾಮಿ ದೇವೇಗೌಡ ಅವರನ್ನು ನಿವಾಸದಲ್ಲಿ ಭೇಟಿಯಾಗಿ ಮಾತು ಕತೆ ನಡೆಸಿದ್ದಾರೆ.
ಬಿಜೆಪಿ- ಕಾಂಗ್ರೆಸ್ ಅತೀ ಹೆಚ್ಚು ಸ್ಥಾನವನ್ನು ಗಳಿಸಿದರೂ ಇದೀಗ ಬಿಜೆಪಿ ಕಾಂಗ್ರೆಸ್ ಭವಿಷ್ಯವನ್ನು ಜೆಡಿಎಸ್ ನಿರ್ಧಾರಿಸಬೇಕಾಗಿದೆ.