News Karnataka Kannada
Monday, April 29 2024
ಬೆಂಗಳೂರು ನಗರ

ಒಂದು ಶಾಲೆಯ 6 ವಿದ್ಯಾರ್ಥಿಗಳ ಸಮಸ್ಯೆ ʼಅಂತರಾಷ್ಟ್ರೀಯ ಸಮಸ್ಯೆʼ ಮಾಡಲು ಯತ್ನ : ಸಚಿವ ಬಿ.ಸಿ ನಾಗೇಶ್‌

Bc Nagesh.
Photo Credit :

ಬೆಂಗಳೂರು : ಒಂದು ಶಾಲೆಯ 6 ವಿದ್ಯಾರ್ಥಿಗಳ ಸಮಸ್ಯೆಯನ್ನು ಅಂತರಾಷ್ಟ್ರೀಯ ಸಮಸ್ಯೆ ಮಾಡಲು ಪ್ರಯತ್ನಿಸುತ್ತಿದ್ದಾರೆ,ಇನ್ನು ‘ದೇಶದಲ್ಲಿ ಗೊಂದಲ ಸೃಷ್ಟಿಸಲು ಹಲವರು ಯತ್ನಿಸುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಹೇಳಿದ್ದಾರೆ.

ಹಾಸನ ಜಿಲ್ಲೆ ಅರಸೀಕೆರೆಯಲ್ಲಿ ರಾಜ್ಯದಲ್ಲಿ ಹಿಜಾಬ್‌- ಕೇಸರಿ ಶಾಲು ಸಂಘರ್ಷದಿಂದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.

ಇನ್ನು ಒಂದು ಶಾಲೆಯ 6 ವಿದ್ಯಾರ್ಥಿಗಳ ಸಮಸ್ಯೆಯನ್ನ ಅಂತರಾಷ್ಟ್ರೀಯ ಸಮಸ್ಯೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಹಲವು ದೇಶಗಳಲ್ಲಿ ಹಿಜಾಬ್‌, ಬುರ್ಖಾ ನಿಷೇಧ ಆಗಿದೆ. ಇಟಲಿಯಲ್ಲಿ ಬ್ಯಾನ್‌ ಆದಾಗ ಯಾರಿಗೂ ಸಮಸ್ಯೆ ಇರಲಿಲ್ಲ.

ಸಧ್ಯ ಹೈಕೋರ್ಟ್‌ ಸೂಚನೆಯ ಮೇರೆಗೆ ನಾಳೆಯಿಂದ 10 ನೇ ತರಗತಿವರೆಗಿನ ಶಾಲೆಗಳನ್ನ ಶುರು ಮಾಡಲಾವುದು. ಇನ್ನು ಪಿಯು, ಪದವಿ ಕಾಲೇಜುಗಳನ್ನ ಆರಂಭಿಸುವ ಬಗ್ಗೆ ನಾಳೆ ಸಿಎಂ ಬೊಮ್ಮಾಯಿ ನೇತೃತ್ವದ ಸಭೆ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು. ಅದ್ರಂತೆ, ಮುಂದಿನ ವಾರ ಪದವಿ ಕಾಲೇಜುಗಳೂ ಆರಂಭ ಆಗಲಿವೆ ಎಂದರು.

ಕೋವಿಡ್‌ ಲಸಿಕೆ ಬಗ್ಗೆಯೂ ಗೊಂದಲ ಸೃಷ್ಟಿ ಮಾಡಿದ್ದರು. ಮಕ್ಕಳಲ್ಲಿ ನನ್ನ ದೇಶ ಎಂಬ ಮನೋಭಾವನೆ ಬೆಳೆಯಬೇಕು. ಇನ್ನು ಡಿಸೆಂಬರ್‌ 28ರವರೆಗೆ ವಿದ್ಯಾರ್ಥಿನಿಯರು ಸಮವಸ್ತ್ರದಲ್ಲಿ ಬರುತ್ತಿದ್ದರು. ಬಳಿಕ ಸಮವಸ್ತ್ರದ ಜತೆ ಹಿಜಾಬ್‌ ಧರಿಸಿ ಬರುವುದಾಗಿ ಹಠ ಹಿಡಿದಿದ್ದಾರೆ. ಆ ವಿದ್ಯಾರ್ಥಿನಿಯರು ಯಾಕೆ ಹಾಗೆ ವರ್ತಿಸಿದರೆಂದು ಗೊತ್ತಿಲ್ಲ ಎಂದು ಹೇಳಿದರು.

ಫ್ರಾನ್ಸ್‌, ಜರ್ಮನ್‌ ,ರಷ್ಯಾದಲ್ಲಿ ಆದಾಗಲೂ ಸಮಸ್ಯೆ ಆಗಿಲ್ಲ. ಮುಸಾಲ್ಮಾನ್‌ ದೇಶಗಳಲ್ಲೂ ಹಿಜಾಬ್‌, ಬುರ್ಖಾ ಬ್ಯಾನ್‌ ಆಗಿದೆ. ನಮ್ಮಲ್ಲಿ ಹಾಕಬೇಕಾ, ಬೇಡವಾ ಎಂದು ಮಾತನಾಡಿಯೇ ಇಲ್ಲ. ಮಕ್ಕಳು ಸಮವಸ್ತ್ರದಲ್ಲಿ ಶಾಲೆಗೆ ಬರಬೇಕೆಂದು ಹೇಳಿದ್ದೇವೆ ಅಷ್ಟೇ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು