ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯಲಿರುವ ಏರೋ ಇಂಡಿಯಾದ ತಯಾರಿಯ ಪರಿಶೀಲನೆ ನಡೆಸಲಿರುವರು.
ವರ್ಚುವಲ್ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇದರಲ್ಲಿ ಭಾಗಿಯಾಗುವರು. ವಾಯುಸೇನೆಯ ಹಿರಿಯ ಅಧಿಕಾರಿಗಳು ಕೂಡ ಇದರಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
2021ರ ಫೆಬ್ರವರಿ 3-7ರ ತನಕ ಏರೋ ಇಂಡಿಯಾವು ನಡೆಯಲಿದೆ. ಆದರೆ ಕೋವಿಡ್-19 ಕಾರಣದಿಂದಾಗಿ ಇದರಲ್ಲಿ ಭಾಗಿಯಾಗುವವರ ಉತ್ಸಾಹಕ್ಕೆ ಹಿನ್ನಡೆಯಾಗಿದೆ.
ಮುಖ್ಯಕಾರ್ಯದರ್ಶಿ ಟಿಎಂ ವಿಜಯ ಭಾಸ್ಕರ್ ಮತ್ತು ಹಿರಿಯ ಅಧಿಕಾರಿಗಳು ಕೂಡ ಮುಂದಿನ ವರ್ಷದ ಏರೋ ಇಂಡಿಯಾ ತಯಾರಿ ಸಭೆಯಲ್ಲಿ ಭಾಗಿಯಾಗುವರು ಎಂದು ತಿಳಿದುಬಂದಿದೆ.