ಬೆಂಗಳೂರು ಬೆಚ್ಚಿ ಬೀಳಿಸುವಂತೆ ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಆಸಿಡ್ ದಾಳಿ ನಡೆಸಿದ್ದು,ದಾಳಿಯಿಂದಾಗಿ ಯುವತಿ ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.
ಇತ್ತ ಕಿರಾತಕ ನಾಗೇಶ್ ಬಂಧನಕ್ಕಾಗಿ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ. ಈ ಕುರಿತಂತೆ ಪೊಲೀಸರು ಎಲ್ಲಾ ರಾಜ್ಯಗಳಿಗೆ, ಎಲ್ಲಾ ಭಾಷೆಯಗಳಲ್ಲಿಯೂ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದು, ಆಸಿಡ್ ದಾಳಿ ಮಾಡಿ ತಲೆ ಮರೆಸಿಕೊಂಡಿರುವಂತ ನಾಗೇಶ್ ಬಂಧನಕ್ಕಾಗಿ ಅಲರ್ಟ್ ಇರುವಂತೆ ಏರ್ ಪೋರ್ಟ್, ರೈಲ್ವೆ ಪೊಲೀಸರನ್ನು ಕೋರಿದ್ದಾರೆ.
ಇನ್ನೂ ಆಸಿಡ್ ದಾಳಿಯ ಬಳಿಕ ಪರಾರಿಯಾಗಿರುವ ಆರೋಪಿ ನಾಗೇಶ್ ತಮಿಳುನಾಡಿನಲ್ಲಿ ಅವಿತಿರುವ ಶಂಕೆಯನ್ನು ಪೊಲೀಸರು ವ್ಯಕ್ತ ಪಡಿಸಿದ್ದಾರೆ.
ತಮಿಳುನಾಡಿನ ದೇವಸ್ಥಾನವೊಂದರಲ್ಲಿದ್ದಾನೆ ಎಂದು ಹೇಳಲಾಗುತ್ತಿದ್ದು, ಆ ದೇಗುಲಕ್ಕೂ ಕರ್ನಾಟಕ ಪೊಲೀಸರು ಭೇಟಿ ನೀಡಿ, ಶೋಧಕಾರ್ಯ ನಡೆಸುತ್ತಿದ್ದಾರೆ.