News Karnataka Kannada
Friday, May 03 2024
ಬೆಂಗಳೂರು ಗ್ರಾಮಾಂತರ

ಅತ್ತೆ ಕಿರುಕುಳಕ್ಕೆ ಮನನೊಂದ ಅಳಿಯ ವಿಷ ಕುಡಿದು ಆತ್ಮಹತ್ಯೆಗೆ ಶರಣು

Davanagere: Youth consumed poison after murdering woman, dies
Photo Credit : IANS

ನೆಲಮಂಗಲ : ಸಾಯುವ ಮುನ್ನ ಡೆತ್ ನೋಟ್ ಬರೆದಿರುವ ಆನಂದ್, ತನ್ನ ಆಸ್ತಿಯನ್ನ ತನ್ನ ತಮ್ಮನ ಮಕ್ಕಳಿಗೆ ನೀಡುವಂತೆ ಬರೆದಿದ್ದಾನೆ. ಹಾಗೆಯೇ ಅತ್ತೆ, ಬಾಮೈದ ಮತ್ತು ಹೆಂಡತಿ ನೀಡುತ್ತಿದ್ದ ಕಿರುಕುಳವನ್ನ ಡೆತ್ ನೋಟ್‌ನಲ್ಲಿ ಪ್ರಸ್ತಾಪಿಸಿದ್ದಾನೆ. ಈ ಕುರಿತು ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಳಿಯನ ಆಸ್ತಿ ಮೇಲೆ ಕಣ್ಣು ಹಾಕಿದ್ದ ಅತ್ತೆ, ಅಳಿಯನನ್ನ ಮನೆಯಲ್ಲಿ ಕೂಡಿ ಹಾಕಿ ಕಿರುಕುಳ ಕೊಡುತ್ತಿದ್ದಳಂತೆ. ಅತ್ತೆ ಕಿರುಕುಳಕ್ಕೆ ಮನನೊಂದು ಅಳಿಯ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನೆಲಮಂಗಲ ತಾಲೂಕಿನ ತೋಟನಹಳ್ಳಿಯಲ್ಲಿ ನಡೆದಿದೆ. ಆನಂದ್ (38) ಎಂಬಾತ ವಿಷ ಕುಡಿದು ಆತ್ಮಹತ್ಯೆಗೆ ಶರಣಾದ ದುರ್ದೈವಿ.

ಆನಂದ್​​ನ ಪಿತ್ರಾರ್ಜಿತ ಆಸ್ತಿಯನ್ನ ಹೊಡೆಯುವ ಸಂಚು ನಡೆಸಿದ ಅತ್ತೆ ಗಂಗಮ್ಮ, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಳಂತೆ. ಇವಳಿಗೆ ಆನಂದ್​​ ಹೆಂಡತಿ ನೀಲಮ್ಮ ಹಾಗೂ ಬಾಮೈದ ಗಂಗರಾಜು ಸಾಥ್​​ ನೀಡಿದ್ದರಂತೆ. ಅತ್ತೆ, ಹೆಂಡತಿ ಮತ್ತು ಬಾಮೈದ ನೀಡುತ್ತಿದ್ದ ಕಿರುಕುಳವನ್ನ ವಿಡಿಯೋ ಮಾಡಿ ಆನಂದ್​​​ ತನ್ನ ನೋವು ತೋಡಿಕೊಂಡಿದ್ದಾನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು