ಬೆಂಗಳೂರು: ಜನವರಿ 22ರಂದು ಉದ್ಘಾಟನೆಯಾಗುತ್ತಿರುವ ಅಯೋಧ್ಯೆ ಶ್ರೀರಾಮ ಮಂದಿರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೇಶದ ವಿವಿಧ ಮೂಲೆಗಳಿಂದ ಜನರು ಅತ್ತ ತೆರಳುತ್ತಿದ್ದಾರೆ. ಅಯೋಧ್ಯೆಗೆ ಜನರು ತೆರಳಲು ಅನುಕೂಲವಾಗಲೆಂದು ಭಾರತೀಯ ರೈಲ್ವೇ ದೇಶದ ವಿವಿಧ ಮೂಲಗಳಿಂದ ರೈಲುಗಳನ್ನು ಓಡಿಸುತ್ತಿದೆ. ಹಾಗೆಯೇ ಬೆಂಗಳೂರಿನಿಂದಲೂ ರೈಲುಗಳು ಅಯೋಧ್ಯೆಗೆ ತೆರಳಲಿವೆ.
ನೀವೂ ಬೆಂಗಳೂರಿನಿಂದ ಅಯೋಧ್ಯೆಗೆ ತಡೆರಹಿತ ಪ್ರಯಾಣ ನಡೆಸಲು ಮುಂಚಿತವಾಗಿ ರೈಲ್ವೇ ಟಿಕೆಟ್ ಬುಕ್ ಮಾಡಬಹುದಾಗಿದೆ. ಬೆಂಗಳೂರಿನಿಂದ ಅಯೋಧ್ಯೆಗೆ ರೈಲು ಟಿಕೆಟ್ಗಳನ್ನು ಬುಕ್ ಮಾಡಲು ಪ್ರಯಾಣಿಕರು ಆಫ್ಲೈನ್ ಮತ್ತು ಆನ್ಲೈನ್ ಮೋಡ್ಗಳನ್ನು ಬಳಸಿಕೊಳ್ಳಬಹುದು.
ಅಲ್ಲಿ ಪ್ರಯಾಣಿಕರು ಆಸನ ಲಭ್ಯತೆಯನ್ನು ಪರಿಶೀಲಿಸಿ ಅನುಕೂಲಕರವಾದ ಟಿಕೆಟ್ಗಳನ್ನು ಬುಕ್ ಮಾಡಬಹುದು. ಪ್ರಯಾಣಿಕರು ಊಟದ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಐಆರ್ಸಿಟಿಸಿ ಅಧಿಕೃತ ಅಡುಗೆ ಪಾಲುದಾರ ರೈಲ್ಮಿತ್ರದ ಸಹಯೋಗದೊಂದಿಗೆ 450+ ನಿಲ್ದಾಣಗಳಲ್ಲಿ ಇ-ಕೇಟರಿಂಗ್ ಸೇವೆಗಳನ್ನು ನೀಡುತ್ತದೆ.
ರೈಲು ಸಂಖ್ಯೆ 15024 ಯಶವಂತಪುರ-ಗೋರಖ್ಪುರ ನಡುವೆ ಸಂಚರಿಸುವ ಎಕ್ಸ್ಪ್ರೆಸ್. ಈ ರೈಲು ಬೆಂಗಳೂರಿನ ಯಶವಂತಪುರದಿಂದ ರಾತ್ರಿ 11:40 ಕ್ಕೆ ಹೊರಟು ಮರುದಿನ ಸಂಜೆ 04:26ಕ್ಕೆ ಅಯೋಧ್ಯೆಯನ್ನು ತಲುಪುತ್ತದೆ. ರೈಲು ಸಂಖ್ಯೆ 22534 ಯಶವಂತಪುರ ಗೋರಖ್ಪುರ ನಡುವೆ ಎಕ್ಸ್ಪ್ರೆಸ್ ಈ ರೈಲು ಬೆಂಗಳೂರಿನ ಯಶವಂತಪುರದಿಂದ ರಾತ್ರಿ 11:40 ಕ್ಕೆ ಹೊರಟು ಮರುದಿನ ಸಂಜೆ 03:50ಕ್ಕೆ ನಿಗೋರಖ್ಪುರವನ್ನು ತಲುಪುತ್ತದೆ.ರೈಲು ಸಂಖ್ಯೆ 12592 ಯಶವಂತಪುರ ಗೋರಖ್ಪುರ ನಡುವೆ ಎಕ್ಸ್ಪ್ರೆಸ್ ಈ ರೈಲು ಬೆಂಗಳೂರಿನ ಯಶವಂತಪುರದಿಂದ ಸಂಜೆ 05:20 ಕ್ಕೆ ಹೊರಟು ಮರುದಿನ ಸಂಜೆ 01:17ಕ್ಕೆ ನಿಗದಿತ ಸ್ಥಳವನ್ನು ತಲುಪುತ್ತದೆ.
ಇನ್ನು ಟಿಕೆಟ್ ದರ ನೋಡುವುದಾದರೇ. . . ಅಯೋಧ್ಯೆಗೆ ಸಾಮಾನ್ಯ ಟಿಕೆಟ್ ದರ ಬೆಲೆ 840.99 ರೂ. ಆಗಿದೆ. ಪ್ರಥಮ ದರ್ಜೆ ಟಿಕೆಟ್ ದರ 2,183.79 ರೂ. ಅಯೋಧ್ಯೆಗೆ ಮೊದಲ ರೈಲು ಬೆಳಗ್ಗೆ 3:10 ಹೊರಡಲಿದ್ದು, ಕೊನೆಯ ರೈಲು ರಾತ್ರಿ 11:40ಕ್ಕೆ ಇರುತ್ತದೆ.