Bengaluru 22°C
Ad

ಎಟಿಎಂ ಹಣ ಕಳ್ಳತನ ಪ್ರಕರಣ : ಮೂವರು ಆರೋಪಿಗಳು ಪೊಲೀಸರ ವಶಕ್ಕೆ

ನಗರದ ವಿಕ್ಟೋರಿಯಾ ಲೇಔಟ್​ನಲ್ಲಿರುವ ಎಟಿಎಂನಲ್ಲಿ ಹಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ನಗರದ ವಿಕ್ಟೋರಿಯಾ ಲೇಔಟ್​ನಲ್ಲಿರುವ ಎಟಿಎಂನಲ್ಲಿ ಹಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗನ್ನು ಪೊಲೀಸರು ಬಂಧಿಸಿದ್ದಾರೆ.

ಮುರಳಿ ಮೋಹನ್, ಪೋತಾಲು ಸಾಹಿ ತೇಜ ಹಾಗೂ ಎರೆ ಕಾಲ ವೆಂಕಟೇಶ್ ಬಂಧಿತ ಆರೋಪಿಗಳು. ಮುರುಳಿ ಈ ಹಿಂದೆ ಎಟಿಎಂಗಳಿಗೆ ಹಣ ಹಾಕುವ ಸೆಕ್ಯೂರಿಟಿ ವ್ಯಾಲ್ಯೂ ಇಂಡಿಯಾ ಲಿಮಿಟೆಡ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದನು. ಬಳಿಕ 2022 ರಲ್ಲಿ ಕೆಲಸ ಬಿಟ್ಟಿದ್ದನು. ಸದ್ಯ ಅದೇ ಏಜೆನ್ಸಿಯಲ್ಲಿ ಎರೆ ಕಾಲು ವೆಂಕಟೇಶ ಕೆಲಸ ಮಾಡುತ್ತಿದ್ದನು.

ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ ಮುರುಳಿ ಹಾಗೂ ಎರೆ ಕಾಲ ವೆಂಕಟೇಶ್ ನಡುವೆ ಪರಿಚಯವಾಗಿತ್ತು. ಅಲ್ಲದೇ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಅಕ್ಕ-ಪಕ್ಕದ ಹಳ್ಳಿಯವರು. ಇತ್ತ ಕೆಲಸ ಬಿಟ್ಟು ಊರಿಗೆ ಹೋಗಿದ್ದ ಮುರುಳಿ, ಮೈತುಂಬ ಸಾಲ ಮಾಡಿಕೊಂಡಿದ್ದ. ನಂತರ ಸಾಲ ತೀರಿಸಲು ಹಣ ಮಾಡುವ ನಿರ್ಧಾರ ಮಾಡಿದ ಆತ, ಪ್ಲ್ಯಾನ್ ಒಂದನ್ನು ಮಾಡುತ್ತಾನೆ.

ಎಟಿಎಂ ಗೆ ಹಣ ಹಾಕಲು 12 ಸಂಖ್ಯೆಯ ಪಿನ್ ನಂಬರ್ ಕಸ್ಟೋಡಿಯನ್​ಗಳಿಗೆ ನೀಡಲಾಗಿರುತ್ತದೆ. ಇಬ್ಬರು ವ್ಯಕ್ತಿಗಳಿಗೆ ತಲಾ ಆರು ನಂಬರ್ ಪಾಸ್ ವರ್ಡ್ ಕೊಡುತ್ತಾರೆ. ಒಮ್ಮೆ ಕಸ್ಟೋಡಿಯನ್ ಬರದಿದ್ದಾಗ ಮೊದಲ ಪಾಸ್​ವರ್ಡ್​ನ್ನು ಪಡೆದಿದ್ದ. ಅದೇ ನಂಬರ್​ನ್ನು ತನ್ನ ಬಳಿ ಬರೆದಿಟ್ಟುಕೊಂಡು ಕೆಲಸ ಬಿಟ್ಟಿದ್ದನು.

ಇದಾದ ಬಳಿಕ ಕೊನೆಯ 6 ಪಾಸ್ ವರ್ಡ್ ಎರೆ ಕಾಲ ವೆಂಕಟೇಶ್​ಗೆ ಗೊತ್ತಿರುತ್ತದೆ. ಹಾಗಾಗಿ ಆತನನ್ನ ಸಂಪರ್ಕ ಮಾಡಿದ್ದ ಮುರುಳಿ, ಆತನಿಗೂ ಈ ಕೃತ್ಯದ ಬಗ್ಗೆ ಹೇಳುತ್ತಾನೆ. ಹಣದ ಅವಶ್ಯಕತೆ ಇದ್ದ ಆತ, ಇದಕ್ಕೆ ಒಪ್ಪಿ ಪಾಸ್ ವರ್ಡ್ ನೀಡುತ್ತಾನೆ.

ಇದಾದ ನಂತರ ಮೇ.31 ರಂದು ಮುರುಳಿ ಮತ್ತು ಪೋತಾಲು ಸಾಹಿ ತೇಜ ಬೆಂಗಳೂರಿಗೆ ಬಂದಿದ್ದರು. ಎರೆ ಕಾಲ ವೆಂಕಟೇಶ್ ಊರಿನಲ್ಲೇ ಉಳಿದುಕೊಂಡಿದ್ದ. ಮಧ್ಯರಾತ್ರಿ ಎಟಿಎಂಗೆ ತೆರಳಿ ಪಾಸ್ ವರ್ಡ್ ಬಳಸಿ ಬಾಕ್ಸ್​ನಲ್ಲಿ ಇದ್ದ 20 ಲಕ್ಷ ಹಣ ಕದ್ದು ಪರಾರಿಯಾಗಿದ್ದಾರೆ. ಬಳಿಕ ಬೆಂಗಳೂರಲ್ಲೇ ಎರಡು ದಿನ ಉಳಿದುಕೊಂಡು, ಆಂಧ್ರಗೆ ತೆರಳುವಾಗ ಇಬ್ಬರನ್ನು ಪೊಲೀಸರು ಲಾಕ್ ಮಾಡಿ ಹಣವನ್ನು ವಶಕ್ಕೆ ಪಡೆದಿದ್ದಾರೆ.

Ad
Ad
Nk Channel Final 21 09 2023
Ad