ಬೆಂಗಳೂರು: ನಿಟ್ಟೂರು-ಸಂಪಿಗೆ ರಸ್ತೆ ರೈಲ್ವೆ ನಿಲ್ದಾಣ ನಡುವಿನ ಲೇವಲ್ ಕ್ರಾಸಿಂಗ್ನಲ್ಲಿ ಗರ್ಡರ್ ಅಳವಡಿಕೆ ಸಂಬಂಧಿತ ಕಾಮಗಾರಿ ಹಿನ್ನೆಲೆಯಲ್ಲಿ ಜೂ.27ರಿಂದ ಜು.4ರವರೆಗೆ ಈ ಮಾರ್ಗದ 8 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಇನ್ನು ಉಳಿದ 5 ರೈಲುಗಳನ್ನು ಭಾಗಶಃ ರದ್ದು ಗೊಳಿಸಲಾಗುತ್ತಿದೆ.
ತುಮಕೂರು-ಚಾಮರಾಜನಗರ (07346), ಚಾಮರಾಜನಗರ-ಮೈಸೂರು (07328), ಚಾಮರಾಜನಗರ-ಯಶವಂತಪುರ (16239), ಯಶವಂತಪುರ-ಚಾಮರಾಜನಗರ (16240), ತುಮಕೂರು-ಕೆಎಸ್ಆರ್ ಬೆಂಗಳೂರು (06576), ಕೆಎಸ್ಆರ್ ಬೆಂಗಳೂರು-ತುಮಕೂರು (06575), ಯಶವಂತಪುರ-ಶಿವಮೊಗ್ಗ (16579), ಶಿವಮೊಗ್ಗ-ಯಶವಂತಪುರ (16580) ರೈಲುಗಳನ್ನು ರದ್ದು ಮಾಡಲಾಗಿದೆ.
ಭಾಗಶಃ ರದ್ದು: ಇನ್ನು ಕೆಎಸ್ಆರ್ ಬೆಂಗಳೂರು-ತುಮಕೂರು-ಕೆಎಸ್ಆರ್ ಬೆಂಗಳೂರು (06571) ರೈಲುಗಳನ್ನು ಹಿರೇಹಳ್ಳಿ-ತುಮಕೂರು ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ತಾಳಗುಪ್ಪ-ಕೆಎಸ್ಆರ್ ಬೆಂಗಳೂರು ರೈಲು (06572) , ತಾಳಗುಪ್ಪ ಕೆಎಸ್ಆರ್ ಬೆಂಗಳೂರು (20652), ಕೆಎಸ್ಆರ್ ಬೆಂಗಳೂರು-ಧಾರವಾಡ (ಇಂಟರ್ಸಿಟಿ) (12725/6), ರೈಲುಗಳು ಅರಸೀಕರೆ-ಬೆಂಗಳೂರು ನಡುವೆ ಭಾಗಶಃ ರದ್ದು ಮಾಡಲಾಗಿದೆ.
ಮಾರ್ಗ ಬದಲು: ವಾಸ್ಕೊಡ ಗಾಮ-ಯಶವಂತಪುರ ರೈಲು (17310), ಮೈಸೂರು- ವಾರಾಣಸಿ (22687), ಯಶವಂತಪುರ-ಜೈಪುರ (82653), ವಿಶ್ವಮಾನವ ಮೈಸೂರು-ಬೆಳಗಾವಿ (17326) ರೈಲು ಅರಸಿಕೆರೆ, ಹಾಸನ, ನೆಲಮಂಗಲ ಮೂಲಕ ಯಶವಂತಪುರಕ್ಕೆ ಬರಲಿವೆ. ಮೈಸೂರು-ಉದಯಪುರ ರೈಲು (19668) ಎಸ್ಆರ್ ಬೆಂಗಳೂರು, ಯಶವಂತಪುರ, ನೆಲಮಂಗಲ, ಹಾಸನ, ಅರಸಿಕೆರೆ, ದಾವಣಗೆರೆಗೆ ತೆರಳಲಿದೆ.