ಆನೇಕಲ್: ಪೆಲಿನ್ ಪ್ಯಾನ್ಲೂಕೋಪೇನಿಯಾ ಎಂಬ ಮಾರಕ ವೈರಸ್ಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಏಳು ಚಿರತೆ ಮರಿಗಳು ಮೃತಪಟ್ಟಿವೆ. ರಾಜ್ಯದ ನಾನಾ ಭಾಗಗಳ ರೈತರ ಜಮೀನುಗಳ ಬಳಿ ಸಿಕ್ಕ ಚಿರತೆ ಮರಿಗಳನ್ನು ರಕ್ಷಣೆ ಮಾಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನವಕ್ಕೆ ಕರೆತರಲಾಗಿತ್ತು.
ಈ ಚಿರತೆ ಮರಿಗಳನ್ನು ಝೂನಲ್ಲಿ ಇರಿಸಲಾಗಿತ್ತು. ಆದರೆ ಈ ಚಿರತೆ ಮರಿಗಳು ಸೋಂಕಿಗೆ ಮೃತಪಟ್ಟಿವೆ. ಈ ಮಾರಕ ರೋಗ ಮೊದಲಿಗೆ ಆಗಸ್ಟ್ 22ರಂದು ಕಾಣಿಸಿಕೊಂಡಿದ್ದು, ಸೆ.5ರ ಒಳಗೆ ರೋಗಕ್ಕೆ ಏಳು ಚಿರತೆಗಳ ಸಾವಿಗೀಡಾದವು.
ಸೋಂಕು ತಗುಲಿದ ಬಳಿಕ ಜೀರ್ಣ ಕ್ರೀಯೆ ಆಗದೇ ರಕ್ತ ವಾಂತಿಯಾಗಿ ಪ್ರಾಣ ಬಿಟ್ಟಿವೆ. ಈ ಸೋಂಕು ಮನೆಯ ಸಾಕು ಬೆಕ್ಕುಗಳಿಂದ ಹರಡುತ್ತದೆ. ಮನೆಯಲ್ಲಿ ಬೆಕ್ಕು ಸಾಕಿದ್ದ ಅನಿಮಲ್ ಕೀಪರ್ಗಳು ಊಟ ಪ್ರಾಣಿಗಳಿಗೆ ಆಹಾರ ನೀಡಲು ಹೋದಾಗ ಸೋಂಕು ಅಂಟಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕಾಗಿ ಡಾ.ಉಮಾಶಂಕರ್, ಡಾ. ಮಂಜುನಾಥ್ ನೇತೃತ್ವದಲ್ಲಿ 11 ಜನರ ತಂಡ ರಚಿಸಲಾಗಿದೆ.
ಈ ತಂಡ ಬೂಸ್ಟರ್ ಡೋಸ್ ನೀಡಿ ಪ್ರಾಣಿಗಳಿಗೆ ಸೋಂಕು ತಗುಲದಂತೆ ಕ್ರಮ ಕೈಗೊಂಡಿದೆ.