News Karnataka Kannada
Monday, April 29 2024
ಬೆಂಗಳೂರು

ಮಾರಕ ವೈರಸ್​ಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ 7 ಚಿರತೆ ಮರಿಗಳು ಬಲಿ

 Leopard Cub
Photo Credit : News Kannada

ಆನೇಕಲ್: ಪೆಲಿನ್ ಪ್ಯಾನ್ಲೂಕೋಪೇನಿಯಾ ಎಂಬ ಮಾರಕ ವೈರಸ್​​ಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿನ ಏಳು ಚಿರತೆ ಮರಿಗಳು ಮೃತಪಟ್ಟಿವೆ. ರಾಜ್ಯದ ನಾನಾ ಭಾಗಗಳ ರೈತರ ಜಮೀನುಗಳ ಬಳಿ ಸಿಕ್ಕ ಚಿರತೆ ಮರಿಗಳನ್ನು ರಕ್ಷಣೆ ಮಾಡಿ ಬನ್ನೇರುಘಟ್ಟ ಜೈವಿಕ ಉದ್ಯಾನವನವಕ್ಕೆ ಕರೆತರಲಾಗಿತ್ತು.

ಈ ಚಿರತೆ ಮರಿಗಳನ್ನು ಝೂನಲ್ಲಿ ಇರಿಸಲಾಗಿತ್ತು. ಆದರೆ ಈ ಚಿರತೆ ಮರಿಗಳು ಸೋಂಕಿಗೆ ಮೃತಪಟ್ಟಿವೆ. ಈ ಮಾರಕ ರೋಗ ಮೊದಲಿಗೆ ಆಗಸ್ಟ್ 22ರಂದು ಕಾಣಿಸಿಕೊಂಡಿದ್ದು, ಸೆ.5ರ ಒಳಗೆ ರೋಗಕ್ಕೆ ಏಳು ಚಿರತೆಗಳ ಸಾವಿಗೀಡಾದವು.

ಸೋಂಕು ತಗುಲಿದ ಬಳಿಕ ಜೀರ್ಣ ಕ್ರೀಯೆ ಆಗದೇ ರಕ್ತ ವಾಂತಿಯಾಗಿ ಪ್ರಾಣ ಬಿಟ್ಟಿವೆ. ಈ ಸೋಂಕು ಮನೆಯ ಸಾಕು ಬೆಕ್ಕುಗಳಿಂದ ಹರಡುತ್ತದೆ. ಮನೆಯಲ್ಲಿ ಬೆಕ್ಕು ಸಾಕಿದ್ದ ಅನಿಮಲ್ ಕೀಪರ್​​​ಗಳು ಊಟ ಪ್ರಾಣಿಗಳಿಗೆ ಆಹಾರ ನೀಡಲು ಹೋದಾಗ ಸೋಂಕು ಅಂಟಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕಾಗಿ ಡಾ.ಉಮಾಶಂಕರ್, ಡಾ. ಮಂಜುನಾಥ್ ನೇತೃತ್ವದಲ್ಲಿ 11 ಜನರ ತಂಡ ರಚಿಸಲಾಗಿದೆ.

ಈ ತಂಡ ಬೂಸ್ಟರ್ ಡೋಸ್ ನೀಡಿ ಪ್ರಾಣಿಗಳಿಗೆ ಸೋಂಕು ತಗುಲದಂತೆ ಕ್ರಮ ಕೈಗೊಂಡಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು