ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಒಪ್ಪಿಗೆ ಮೇರೆಗೆ ರಾಜ್ಯದ ವಿವಿಧ ಕಾರಾಗೃಹಗಳಲ್ಲಿದ್ದ 61 ಕೈದಿಗಳಿಗೆ ಬಿಡುಗಡೆ ಭಾಗ್ಯ ಲಭಿಸಿದೆ. ಸನ್ನಡತೆ ಆಧಾರದ ಮೇಲೆ ಇವರನ್ನು ರಿಲೀಸ್ ಮಾಡಲಿದ್ದಾರೆ.
ಗೃಹ ಇಲಾಖೆಯು ಸನ್ನಡತೆ ಆಧಾರದ ಮೇಲೆ 64 ಕೈದಿಗಳ ರಿಲೀಸ್ಗೆ ಪಟ್ಟಿ ತಯಾರಿಸಿತ್ತು. ಬಳಿಕ ಈ ಪಟ್ಟಿಯನ್ನ ರಾಜ್ಯಪಾಲರಿಗೆ ನೀಡಿತ್ತು. ಈ ಪೈಕಿ ಮೊದಲು 57 ಕೈದಿಗಳ ರಿಲೀಸ್ಗೆ ರಾಜ್ಯಪಾಲರ ಒಪ್ಪಿಗೆ ಸೂಚಿಸಿದ್ದರು. 7 ಕೈದಿಗಳ ಹೆಸರನ್ನ ವಾಪಸ್ ಕಳುಹಿಸಿದ್ದರು.
ಬಳಿಕ ರಾಜ್ಯಪಾಲರು 7 ಕೈದಿಗಳ ಪಟ್ಟಿಯನ್ನು ಮರು ಪರಿಶೀಲನೆ ನಡೆಸಿ ಸರ್ಕಾರ ಕಳುಹಿಸಿದ್ದರು. 2ನೇ ಪಟ್ಟಿಯಲ್ಲಿ 7ರಲ್ಲಿ 4 ಕೈದಿಗಳ ಬಿಡುಗಡೆಗೆ ಪುನಃ ಒಪ್ಪಿಗೆ ಸೂಚಿಸಿದ್ದಾರೆ.