ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ಅವರ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಈ ಬಗ್ಗೆ ಸತ್ಯಜಿತ್ ಅವರ ಪುತ್ರ ಆಕಾಶ್ ಮಾತನಾಡಿದ್ದು, ತಂದೆಗೆ ಹಾರ್ಟ್ ಸ್ಟ್ರೋಕ್, ಲಿವರ್ ಹಾಗೂ ಕಿಡ್ನಿ ಸಮಸ್ಯೆ ಇದೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಆದರೆ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ.
ನಮ್ಮ ಕುಟುಂಬದಲ್ಲಿ ನಾನಾ ಸಮಸ್ಯೆಗಳಿವೆ. ಇದರಿಂದ ತಂದೆ ಆರೋಗ್ಯ ಕ್ಷೀಣಿಸಿತ್ತು. ಇದೀಗ ಮತ್ತಷ್ಟು ಹದಗೆಟ್ಟಿದೆ. ನನ್ನ ಅಕ್ಕ ಇಷ್ಟಾದರೂ ಆಸ್ಪತ್ರೆ ಕಡೆ ಮುಖ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಮತ್ತು ಚಿತ್ರರಂಗದ ಕಡೆಯಿಂದ ಏನಾದರೂ ಸಹಕಾರ ಸಿಕ್ಕರೆ ಸಹಾಯ ಆಗುತ್ತದೆ.ಕಲಾವಿದರ ಸಂಘದಿಂದ ಯಾವುದೇ ಇನ್ಶೂರೆನ್ಸ್ ಕೂಡ ಇಲ್ಲ ಎಂದು ಆಕಾಶ್ ಹೇಳಿದ್ದಾರೆ.