News Karnataka Kannada
Monday, May 06 2024
ಬೆಂಗಳೂರು

ಸಿಎಂ ಆದ ಬಳಿಕ ಮೊದಲ ಚುನಾವಣೆ ಎದುರಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Basavaraj Bommaih 20082021
Photo Credit :

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಬಳಿಕ ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಹೀಗಾಗಿ ಅವರಿಗೆ ಹಾನಗಲ್ ಮತ್ತು ಸಿಂದಗಿ ಉಪಚುನಾವಣೆ ಮಹತ್ವದ್ದಾಗಿದೆ.

ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ಬೆಂಬಲಿತ ನಾಯಕರೊಂದಿಗೆ ಈ ಎರಡು ಕ್ಷೇತ್ರಗಳಲ್ಲಿ ಬೀಡು ಬಿಟ್ಟಿದ್ದು, ಆ ಮೂಲಕ ಉಪಚುನಾವಣೆಯ ರಣಾಂಗಣದಲ್ಲಿ ಬೀಡು ಬಿಟ್ಟಿರುವ ಎರಡನೇ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಇವರಿಗಿದೆ. 1978ರಲ್ಲಿ ಚಿಕ್ಕಮಗಳೂರಿನಲ್ಲಿ ತಮ್ಮ ಸಚಿವ ಸಂಪುಟದ ಜತೆಗೂಡಿದ ದೇವರಾಜ್ ಅರಸ್ ಅವರು ಅಲ್ಲಿಯೇ ಬೀಡು ಬಿಟ್ಟು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಅದೇ ಚುನಾವಣೆಯಲ್ಲಿ ಜನತಾ ಪಕ್ಷದ ನಾಯಕರು ಮತ್ತು ಜಾರ್ಜ್ ಫರ್ನಾಂಡಿಸ್ ಅವರಂತಹ ದಿಗ್ಗಜರು ತೀವ್ರ ಪ್ರಚಾರ ನಡೆಸಿದ್ದರಿಂದ ಅಂತಿಮವಾಗಿ, ಇಂದಿರಾ ಗಾಂಧಿ ಗೆದ್ದರು.

‘ಮುಖ್ಯಮಂತ್ರಿ ಮತ್ತು ಸಂಪುಟದ ಸಚಿವರು ತೀವ್ರ ಪ್ರಚಾರ ನಡೆಸಿದರೆ ಅಲೆ ಹೇಗೆ ತಿರುಗುತ್ತದೆ ಎಂಬುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ’ ಎಂದು ಜನತಾ ಪರಿವಾರದ ಮಾಜಿ ಸಚಿವ ಎಂ.ರಘುಪತಿ ಹೇಳಿದ್ದಾರೆ. ದೇವರಾಜ್ ಅರಸು ಕೂಡ ನಾಲ್ಕು ದಿನಗಳ ಕಾಲ ರಾಯಚೂರು ಜಿಲ್ಲೆಯಲ್ಲಿ ಉಪಚುನಾವಣೆಗಾಗಿ ಬೀಡುಬಿಟ್ಟಿದ್ದರು, ಅದು ಮತ್ತೆ ಪ್ರಮುಖ ಕದನವಾಗಿತ್ತು. ಇದೀಗ ಅದೇ ರೀತಿಯ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ, ಮುಖ್ಯಮಂತ್ರಿಗಳು ಸಂಕ್ಷಿಪ್ತ ಭೇಟಿಗಳನ್ನು ಮಾಡುತ್ತಾರೆ. ರಾಮಕೃಷ್ಣ ಹೆಗಡೆ, ಜೆ ಎಚ್ ಪಟೇಲ್ ಮತ್ತು ಎಸ್‌ಎಂ ಕೃಷ್ಣ ಅವರು ಹೆಚ್ಚೆಂದರೆ ಒಂದು ಅಥವಾ ಎರಡು ದಿನ ಪ್ರಚಾರ ಮಾಡಿದ್ದರು. ಆದರೆ ಇತರೆ ಸಿಎಂಗಳು ಉಪ ಚುನಾವಣಾ ಕ್ಷೇತ್ರಗಳತ್ತ ಇಣುಕಿಯೂ ನೋಡಿರಲಿಲ್ಲ. ಈ ಹಿಂದೆ ‘ಆಪರೇಷನ್ ಕಮಲ’ ದಿಂದಾಗಿ ಅತ್ಯಧಿಕ ಉಪಚುನಾವಣೆ ಎದುರಿಸಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರೂ ಕೂಡ ಬೊಮ್ಮಾಯಿ ಅವರಂತೆ ಯಾವ ಕ್ಷೇತ್ರದಲ್ಲಿಯೂ ಉಳಿದಿರಲಿಲ್ಲ ಎಂಬುದು ಗಮನಾರ್ಹ.

ವಿಮರ್ಶಕರು ಅದನ್ನು ಆತ್ಮವಿಶ್ವಾಸದ ಕೊರತೆ ಎಂದು ವ್ಯಾಖ್ಯಾನಿಸಿದರೆ, ಅವರ ಬೆಂಬಲಿಗರು ಅವರನ್ನು ಸಮರ್ಥಿಸಿಕೊಳ್ಳುತ್ತಾರೆ. ಈ ಬಗ್ಗೆ ಬಿಜೆಪಿ ವಿಚಾರವಾದಿ ಡಾ.ವಾಮನ್‌ ಆಚಾರ್ಯ ಮಾತನಾಡಿದ್ದು, ‘ಮುಖ್ಯಮಂತ್ರಿಗಳು ಪಕ್ಕದ ಕ್ಷೇತ್ರವಾದ ಶಿಗ್ಗಾಂವಿಯವರು. ಅಲ್ಲದೆ, ಇದು ಅವರ ಮೊದಲ ಚುನಾವಣೆ, ಮತ್ತು ಬಹುಶಃ ಈ ಸರ್ಕಾರಕ್ಕೆ ಕೊನೆಯ ಉಪಚುನಾವಣೆ. ಆದ್ದರಿಂದ ಅವರು ಮುಂಭಾಗದಿಂದ ಮುನ್ನಡೆಸುವುದು ಒಳ್ಳೆಯದು. ಈ ಉಪಚುನಾವಣೆಗಳು ಪಕ್ಷದ ವರ್ಚಸ್ಸನ್ನು ಬಲಪಡಿಸಲು ಪ್ರಮುಖವಾಗಿವೆ. ಸಂಖ್ಯೆಗಳ ಪ್ರಕಾರ, ಇದು ಪಕ್ಷದ ಮೇಲೆ ಪರಿಣಾಮ ಬೀರುವುದಿಲ್ಲ ಆದರೆ ಅದಕ್ಕೆ ಉತ್ತೇಜನವನ್ನು ನೀಡುತ್ತದೆ. ಉಪಚುನಾವಣೆಗಳತ್ತ ಆಡಳಿತ ಪಕ್ಷ ಒಲವು ತೋರುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಮುಂದಿನ ಚುನಾವಣೆಯಲ್ಲೂ ಬೊಮ್ಮಾಯಿ ಪಕ್ಷವನ್ನು ಮುನ್ನಡೆಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.

ಬೊಮ್ಮಾಯಿ ಅವರ ಪ್ರಚಾರ ತಂತ್ರದಲ್ಲಿ ಯಾವುದೇ ತಪ್ಪಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಮೇಲ್ಮನೆ ಮಾಜಿ ಸಭಾಪತಿ ಡಿ ಎಚ್ ಶಂಕರ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ತದ್ವಿರುದ್ಧ ವೆಂಬಂತೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಆತ್ಮವಿಶ್ವಾಸದ ಕೊರತೆ ಟೀಕಿಸಿದ್ದಾರೆ. ‘ಬೊಮ್ಮಾಯಿ ಅವರಿಗೆ ಆತ್ಮವಿಶ್ವಾಸವಿಲ್ಲ ಎಂದು ಇದು ತೋರಿಸುತ್ತದೆ. ನಾನು ಸಿಎಂ ಆಗಿದ್ದ ಕಾಲದಲ್ಲಿ 1993ರಲ್ಲಿ ಯಲಹಂಕದಲ್ಲಿ ಉಪಚುನಾವಣೆ ನಡೆದಿತ್ತು, ಒಂದೆರಡು ದಿನ ಅಲ್ಲಿದ್ದೆ ಮತ್ತು ಆ ಉಪಚುನಾವಣೆಯಲ್ಲಿ ಗೆದ್ದೆವು ಎಂದು ಹೇಳಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು