ಬೆಂಗಳೂರು : ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನ್ಸೋರೆ ಅವರು ಈಗ ಮತ್ತೊಂದು ಪೊಲಿಟಿಕಲ್ ಕೆಥೆ ಹೊಂದಿರುವ ಕಥೆಯೊಂದಿಗೆ ಸಿನೆಮಾ ಮಾಡಲು ಮುಂದಾಗಿದ್ದಾರೆ. ಇದನ್ನು ತೆಲುಗುನಲ್ಲಿ ಮಾಡುತ್ತಿರುವುದು ವಿಶೇಷ.
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರನ್ನು ತೆಲುಗು ಚಿತ್ರರಂಗದ ಕೆಲವು ಚಲನಚಿತ್ರ ನಿರ್ಮಾಪಕರು ಸಂಪರ್ಕಿಸಿದ್ದಾರೆ, ಮನ್ಸೋರೆ ಕರ್ನಾಟಕ ರಾಜಕೀಯ ಬೆಳವಣಿಗೆಗಳನ್ನು ಕುರಿತ ಸಿನಿಮಾ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾಗಾಗಿ ತಮಿಳು ನಟಿ ಸಾಯಿಪಲ್ಲವಿ ಜೊತೆ ಮಾತುಕತೆ ನಡೆಸಿದ್ದಾರೆ. ಈ ಪ್ರಾಜೆಕ್ಟ್ ಬಗ್ಗೆ ಖಚಿತ ಪಡಿಸಿರುವ ಮನ್ಸೋರೆ, ಚರ್ಚೆಯು ಬಹಳ ಪ್ರಾಥಮಿಕ ಹಂತದಲ್ಲಿದ್ದು, ಸಾಯಿ ಪಲ್ಲವಿ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಕಥೆ ಕೇಳಿ ಸಾಯಿ ಪಲ್ಲವಿ ಪ್ರಭಾವಿತರಾಗಿದ್ದು ಫೈನಲ್ ಸ್ಕ್ರಿಪ್ಟ್ ಕಳುಹಿಸುವಂತೆ ನನಗೆ ಕೇಳಿದ್ದಾರೆ, ಮದುವೆಯ ಹಿನ್ನೆಲೆಯಲ್ಲಿ ನಾನು ಸ್ವಲ್ಪ ಸಮಯ ಬ್ರೇಕ್ ತೆಗೆದುಕೊಂಡಿದ್ದು, ಶೀಘ್ರದಲ್ಲೆ ಕಥೆಯ ಮೇಲೆ ಕೆಲಸ ಆರಂಭಿಸುತ್ತೇನೆ ಎಂದು ಮನ್ಸೋರೆ ತಿಳಿಸಿದ್ದಾರೆ.