News Karnataka Kannada
Tuesday, April 30 2024
ಬೆಂಗಳೂರು

ಬೆಂಗಳೂರು :  ಸೆ. 12, 13ರಂದು ಈ ಪ್ರದೇಶದಲ್ಲಿ ಕಾವೇರಿ ನೀರು ಪೂರೈಕೆ ಇರುವುದಿಲ್ಲ

Water
Photo Credit :

ಬೆಂಗಳೂರು : ಕಾವೇರಿ ನೀರು ಪೂರೈಕೆಯಾಗುವ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಸೆ.12, 13 ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಈ ಬಗ್ಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಾಹಿತಿ ನೀಡಿದ್ದು, ಕಾವೇರಿ 3ನೇ ಹಂತದ ಪಂಪಿಂಗ್ ಸ್ಟೇಶನ್​ಗೆ ಸಂಬಂಧಪಟ್ಟ ಲೈನ್​ನಲ್ಲಿ ಲೀಕೇಜ್​ಗಳನ್ನು ಸರಿಪಡಿಸಲು ತುರ್ತಾಗಿ ದುರಸ್ತಿ ಮಾಡಬೇಕಾಗಿರುವುದರಿಂದ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.

ನೀರು ಪೂರೈಕೆಯಲ್ಲಿ ವ್ಯತ್ಯಯ – ಕೋಲ್ಸ್ ರಸ್ತೆ, ಮಚಲಿಬೆಟ್ಟ, ಕಾಕ್ಸ್ ಟೌನ್, ದೊಡ್ಡಿಗುಂಟ, ಜೀವನಹಳ್ಳಿ, ವಿವೇಕಾನಂದ ನಗರ, ದೇವಿಸ್ ರಸ್ತೆ, ಕುಕ್ಸ್ ಟೌನ್, ಹಳೆಯ ಬೈಯಪ್ಪನಹಳ್ಳಿ, ನಾಗಯ್ಯನಪಾಳ್ಯ, ಸತ್ಯನಗರ, ಮಾರುತಿ ನಗರ, ಮುಸ್ಲಿಂ ಕಾಲೊನಿ, ಕುಶಾಲ್ ನಗರ, ಡಿ.ಜೆ. ಹಳ್ಳಿ, ಕೆ.ಜಿ. ಹಳ್ಳಿ, ನಾಗವಾರ, ಸಮಾಧಾನ ನಗರ, ಹೊಸ ಬಾಗಲೂರು, ಹಳೆ ಬಾಗಲೂರು, ಲಿಂಗರಾಜಪುರ, ಚಾಮರಾಜ ಪೇಟೆ, ಬ್ಯಾಂಕ್ ಕಾಲೊನಿ, ಶ್ರೀನಿವಾಸ ನಗರ, ಗವಿಪುರ, ಹನುಮಂತ ನಗರ, ಗಿರಿನಗರ, ಬ್ಯಾಟರಾಯನಪುರ, ರಾಘವೇಂದ್ರ ಬ್ಲಾಕ್, ಅವಲಹಳ್ಳಿ, ಮುನೇಶ್ವರ ಬ್ಲಾಕ್, ಕಾಳಿದಾಸ ಬಡಾವಣೆ, ಶ್ರೀನಗರ, ಬನಶಂಕರಿ ಮೊದಲನೇ ಹಂತ, ಯಶವಂತಪುರ, ಮಲ್ಲೇಶ್ವರ, ಕುಮಾರ ಪಾರ್ಕ್, ಜಯಮಹಲ್, ಶೇಷಾದ್ರಿಪುರಗಳಲ್ಲಿ ನೀರು ಪೂರೈಕೆ ಇರುವುದಿಲ್ಲ.

ಉಳಿದಂತೆ ನಂದಿ ದುರ್ಗ ರಸ್ತೆ, ಜೆ.ಸಿ. ನಗರ, ಸದಾಶಿವನಗರ, ಪ್ಯಾಲೇಸ್ ಗುಟ್ಟಹಳ್ಳಿ, ಬಿ.ಇ.ಎಲ್ ರಸ್ತೆ, ಸಂಜಯ್ ನಗರ, ಡಾಲರ್ಸ್ ಕಾಲೊನಿ, ಆರ್.ಎಂ.ವಿ, ಗೆದ್ದಲಹಳ್ಳಿ, ಭೂಪಸಂದ್ರ, ಕಾವಲ್‍ ಬೈರಸಂದ್ರ, ಗಂಗಾನಗರ, ಆರ್.ಟಿ. ನಗರ, ಮನೋರಾಯನಪಾಳ್ಯ, ಆನಂದನಗರ, ವಿ. ನಾಗೇನಹಳ್ಳಿ, ಸುಲ್ತಾನ್ ಪಾಳ್ಯ, ಶಾಂತಲಾ ನಗರ, ಅಶೋಕ ನಗರ, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಎಚ್‌ಎಎಲ್ 2ನೇ ಹಂತದ ಭಾಗ, ದೂಪನಹಳ್ಳಿ, ಇಂದಿರಾನಗರ, ಕದಿರಯ್ಯನ ಪಾಳ್ಯ, ಕಲ್ಹಳ್ಳಿ, ಆಂಧ್ರ ಕಾಲೊನಿ, ಎಚ್‌ಎಎಲ್ 3ನೇ ಹಂತ, ಜೀವನ್ ಬಿಮಾ ನಗರ, ಕೋಡಿಹಳ್ಳಿ, ಎಂ.ಜಿ. ರಸ್ತೆ, ಹನುಮಂತಪ್ಪ ಬಡಾವಣೆ, ಬಜಾರ್ ಸ್ಟ್ರೀಟ್, ಹಲಸೂರು, ಎಂ. ವಿ. ಗಾರ್ಡನ್, ಮರ್ಫಿ ಟೌನ್, ಜೋಗುಪಾಳ್ಯ, ಕೇಂಬ್ರಿಜ್ ಬಡಾವಣೆ, ದೀನಬಂಧು ನಗರ, ಲಿಂಗರಾಜಪುರ, ಜಾನಕಿರಾಮ್ ಬಡಾವಣೆ, ಸಿದ್ದರಾಮಪ್ಪ ಗಾರ್ಡನ್ ಪ್ರದೇಶಗಳಲ್ಲಿ ನೀರು ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು