ಬೆಂಗಳೂರು: ಇಂದು ಬೆಂಗಳೂರು ವಿಶ್ವವಿದ್ಯಾಲಯ ಸಂಫೂರ್ಣ ಸ್ತಬ್ಧವಾಗಲಿದೆ. ತರಗತಿ ಬಹಿಷ್ಕರಿಸಿ ಅಹೋರಾತ್ರಿ ಹೋರಾಟಕ್ಕೆ ವಿದ್ಯಾರ್ಥಿಗಳ ಒಕ್ಕೂಟ ನಿರ್ಧರಿಸಿದ್ದು, ಇಂದು ಬೆಳಗ್ಗೆ 10 ಗಂಟೆಯಿಂದ ಧರಣಿ ಆರಂಭಿಸೋದಾಗಿ ಘೋಷಿಸಲಾಗಿದೆ.
ಇನ್ನೇನು ಉಪಕುಲಪತಿ ಪ್ರೊಫೆಸರ್ ವೇಣುಗೋಪಾಲ್ ಅಧಿಕಾರಾವಧಿ ಮುಗಿಯುತ್ತೆ.ಹೀಗಿರುವಾಗಲೇ 25 ಕೋಟಿ ರೂಪಾಯಿ ಮಂಜೂರು ಮಾಡಿಸಿಕೊಂಡ ಆರೋಪ ಕೇಳಿ ಬಂದಿತ್ತು. ಉಪಕುಲಪತಿ ಅಕ್ರಮದ ವಿರುದ್ಧ ಮೊನ್ನೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ರು.
ಹೀಗಾಗಿ ವಿವಿ ಸಿಬ್ಬಂದಿ ಹಾಗೂ 50ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಿರುದ್ಧ, ಜ್ಞಾನ ಭಾರತಿ ಪೊಲೀಸ್ ಪ್ರಭಾರ ವಿತ್ತಾಧಿಕಾರಿ ಆರ್.ಜಯಲಕ್ಷ್ಮಿ ದೂರು ನೀಡಿದ್ದರು. ಹೀಗಾಗಿ ನಿನ್ನೆಯ ಪ್ರತಿಯಾಗಿ ದೂರು ಸಲ್ಲಿಸಿದೆ ವಿವಿ ವಿದ್ಯಾರ್ಥಿ ಒಕ್ಕೂಟ. ಸಾಲದ್ದಕ್ಕೆ ವಿದ್ಯಾರ್ಥಿಗಳ ಮೇಲಿನ ದೂರು ಹಿಂಪಡೆಯುವವರೆಗೂ ಧರಣಿ ನಿಲ್ಲಿಸದಿರಲು ನಿರ್ಧರಿಸಲಾಗಿದೆ. ಅದರಂತೆ ಇಂದು ಬೆಂಗಳೂರಿನ ವಿವಿಯಲ್ಲಿ ಸುಮಾರು 7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರೋ ಸಾಧ್ಯತೆ ಇದೆ.