ಬೆಂಗಳೂರು; ಜೆಇಇ ಅಡ್ವಾನ್ಸ್ ಪರೀಕ್ಷೆಯ ಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದಲ್ಲಿ ಅಲೇನ್ ತರಬೇತಿ ಕೇಂದ್ರದ ಮೂಲಕ ತರಬೇತಿ ಪಡೆದಿದ್ದ ವಿದ್ಯಾರ್ಥಿ ವಿರೇಶ್ ಬಿ.ಪಾಟೀಲ್ ಅಖಿಲ ಭಾರತೀಯ ಮಟ್ಟದಲ್ಲಿ 39ನೇ ರ್ಯಾಂಕ್ಗಳಿಸಿದ್ದಾನೆ. ಆ ಮೂಲಕ ಕರ್ನಾಟಕ ಟಾಪರ್ ಆಗಿದ್ದಾನೆ.
ಈ ವಿದ್ಯಾರ್ಥಿಯು ಕರ್ನಾಟಕ ಕೆ-ಸಿಇಟಿನಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ 7ನೇ , ಕಾಮೆಡ್-ಕೆನಲ್ಲಿ ಪ್ರಥಮ ರ್ಯಾಂಕ್, ಜೆಇಇ ಮೈನ್ಸ್ನಲ್ಲಿ 187ನೇ ರ್ಯಾಂಕ್ ಪಡೆದಿದ್ದ. ಈ ಕುರಿತು ಮಾತನಾಡಿದ ಅಲೇನ್ ದಕ್ಷಿಣ ಭಾರತ ಕೇಂದ್ರದ ಶೈಕ್ಷಣಿಕ ಮುಖ್ಯಸ್ಥ ಮಹೇಶ್ ಯಾದವ್, ವೀರೇಶ್ ಈ ಹಿಂದೆ ಕೆಲವು ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದ. ತಿಳಿಯುವ ಆಸಕ್ತಿ ಹೆಚ್ಚಾಗಿರುವುದರಿಂದ ಈ ರ್ಯಾಂಕ್ ಪಡೆಯಲು ವೀರೇಶ್ಗೆ ಸಾಧ್ಯವಾಗಿದೆ. ಆದ್ಯೋತ್ ಭಾರದ್ವಾಜ್ 144, ಅನಿರುದ್ಧ 384 ಈ ರೀತಿ 11 ವಿದ್ಯಾರ್ಥಿಗಳು ಉತ್ತಮ ರ್ಯಾಂಕ್ ಪಡೆದಿದ್ದಾರೆ.
ನಾನು ಪ್ರತಿ ನಿತ್ಯ 6ರಿಂದ 7 ಗಂಟೆ ಸಮಯ ವ್ಯಾಸಂಗ ಮಾಡುತ್ತಿದ್ದೆ. ಉತ್ತಮ ರ್ಯಾಂಕ್ ಬಂದಿದೆ. ದೆಹಲಿಯ ಐಐಟಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಮಾಡುವ ಉದ್ದೇಶ ಇದೆ. ಅಲೇನ್ ಕೇಂದ್ರದ ಉಪನ್ಯಾಸಕರು ಮತ್ತು ಪ್ರೋತ್ಸಾಹ ನೀಡಿದ ಪಾಲಕರಿಗೆ ಧನ್ಯವಾದಗಳು. ವಿರೇಶ್ ಬಿ.ಪಾಟೀಲ್, ಜೆಇಇ 39ನೇ ರ್ಯಾಂಕ್
ವಿರೇಶ್ ಬಿ.ಪಾಟೀಲ್
ಬಸ್ಗೆ ಬೆಂಕಿ ಹತ್ತಿಕೊಂಡು 10 ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಹರಿಯಾಣದ ಕುಂಡಲಿ-ಮನೇಸರ್-ಪಲ್ವಾಲ್ ಎಕ್ಸ್ಪ್ರೆಸ್ ವೇಯಲ್ಲಿ…
ನಮ್ಮ ಮೆಟ್ರೋದಲ್ಲಿ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಹಲವಾರು ನೀತಿ ನಿಯಮಗಳನ್ನು ಬಿಎಂಆರ್ಸಿಎಲ್ ಜಾರಿ ಮಾಡಿದೆ. ಬರೀ ನಿಯಮ ಮಾಡಿದ್ದು ಮಾತ್ರವಲ್ಲದೇ…
ಇಂದು ಚಿನ್ನಸ್ವಾಮಿಯಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಆದರೆ ಈ ಪಂದ್ಯದ ಟಿಕೆಟ್ ನೀಡುತ್ತೇವೆ…
ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಸರಕಾರಕ್ಕೆ ಸವಾಲಾಗಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ದೇಶಿಯ ಮದ್ಯಗಳ ಬೆಲೆ ಹೆಚ್ಚಿಸಲು…
ದೊಡ್ಮನೆ ಕುಡಿ ಯುವರಾಜ್ಕುಮಾರ್ ನಟನೆಯ ‘ಯುವ’ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದ್ದು ಇದೀಗ ಬಹುಭಾಷೆಯಲ್ಲಿ ಯುವ ಸಿನಿಮಾ ಡಬ್ ಆಗಿದೆ.…
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಹಾರ್ದಿಕ್ ಪಾಂಡ್ಯ ಪಡೆ ಮುಂಬೈ ಇಂಡಿಯನ್ಸ್ ಸೋಲನುಭವಿಸಿದೆ.