News Karnataka Kannada
Monday, April 29 2024
ಬೆಂಗಳೂರು

ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಅಲೇನ್ ವಿದ್ಯಾರ್ಥಿ ವಿರೇಶ್ ಬಿ.ಪಾಟೀಲ್ 39ನೇ ರ‍್ಯಾಂಕ್

New Project 2021 10 15t200847.411
Photo Credit :

ಬೆಂಗಳೂರು; ಜೆಇಇ ಅಡ್ವಾನ್ಸ್ ಪರೀಕ್ಷೆಯ ಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದಲ್ಲಿ ಅಲೇನ್ ತರಬೇತಿ ಕೇಂದ್ರದ ಮೂಲಕ ತರಬೇತಿ ಪಡೆದಿದ್ದ ವಿದ್ಯಾರ್ಥಿ ವಿರೇಶ್ ಬಿ.ಪಾಟೀಲ್ ಅಖಿಲ ಭಾರತೀಯ ಮಟ್ಟದಲ್ಲಿ 39ನೇ ರ‌್ಯಾಂಕ್‌ಗಳಿಸಿದ್ದಾನೆ. ಆ ಮೂಲಕ ಕರ್ನಾಟಕ ಟಾಪರ್ ಆಗಿದ್ದಾನೆ.

ಈ ವಿದ್ಯಾರ್ಥಿಯು ಕರ್ನಾಟಕ ಕೆ-ಸಿಇಟಿನಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ 7ನೇ , ಕಾಮೆಡ್-ಕೆನಲ್ಲಿ ಪ್ರಥಮ ರ‌್ಯಾಂಕ್, ಜೆಇಇ ಮೈನ್ಸ್‌ನಲ್ಲಿ 187ನೇ  ರ‍್ಯಾಂಕ್   ಪಡೆದಿದ್ದ. ಈ ಕುರಿತು ಮಾತನಾಡಿದ ಅಲೇನ್ ದಕ್ಷಿಣ ಭಾರತ ಕೇಂದ್ರದ ಶೈಕ್ಷಣಿಕ ಮುಖ್ಯಸ್ಥ ಮಹೇಶ್ ಯಾದವ್, ವೀರೇಶ್ ಈ ಹಿಂದೆ ಕೆಲವು ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದ. ತಿಳಿಯುವ ಆಸಕ್ತಿ ಹೆಚ್ಚಾಗಿರುವುದರಿಂದ ಈ  ರ‍್ಯಾಂಕ್  ಪಡೆಯಲು ವೀರೇಶ್‌ಗೆ ಸಾಧ್ಯವಾಗಿದೆ. ಆದ್ಯೋತ್ ಭಾರದ್ವಾಜ್ 144, ಅನಿರುದ್ಧ 384 ಈ ರೀತಿ 11 ವಿದ್ಯಾರ್ಥಿಗಳು ಉತ್ತಮ  ರ‍್ಯಾಂಕ್ ಪಡೆದಿದ್ದಾರೆ.

ನಾನು ಪ್ರತಿ ನಿತ್ಯ 6ರಿಂದ 7 ಗಂಟೆ ಸಮಯ ವ್ಯಾಸಂಗ ಮಾಡುತ್ತಿದ್ದೆ. ಉತ್ತಮ ರ‌್ಯಾಂಕ್ ಬಂದಿದೆ.  ದೆಹಲಿಯ ಐಐಟಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಮಾಡುವ ಉದ್ದೇಶ ಇದೆ. ಅಲೇನ್ ಕೇಂದ್ರದ ಉಪನ್ಯಾಸಕರು ಮತ್ತು ಪ್ರೋತ್ಸಾಹ ನೀಡಿದ ಪಾಲಕರಿಗೆ ಧನ್ಯವಾದಗಳು. ವಿರೇಶ್ ಬಿ.ಪಾಟೀಲ್, ಜೆಇಇ 39ನೇ  ರ‍್ಯಾಂಕ್

ವಿರೇಶ್ ಬಿ.ಪಾಟೀಲ್

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು