ಬೆಂಗಳೂರು :.ಕೊರೊನ ಮೂರನೇ ಅಲಿಯನ್ನು ಓಡಿಸುವ ಮತ್ತು ನಿಯಂತ್ರಿಸುವ ಮಹತ್ವದ ಜವಾಬ್ದಾರಿ ಜನರ ಮೇಲೆ ಇದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರು ಹಾಗೂ ಕಾರ್ಯಪಡೆಯ ಸದಸ್ಯರಾದ ಡಾಕ್ಟರ್ ಸಿ ಎನ್ ಮಂಜುನಾಥ್ ತಿಳಿಸಿದರು.ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಕರೋನಾ ಕಾರ್ಯಪಡೆ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಾಗಲೇ 3ನೇ ಅಲೆ ಯಾವಾಗ ಬರುತ್ತದೆ ಎಂದು ಎಲ್ಲರ ಮನಸಲ್ಲಿ ಕಾಡುತ್ತಿದೆ ಆದರೆ ಇದನ್ನು ನಿರ್ಧರಿಸುವುದು ನಾವಲ್ಲ ಅಥವಾ ತಜ್ಞ ವೈದ್ಯರಲ್ಲ ಅದು ಜನರ ಮೇಲೆಯೇ ನಿಂತಿದೆ ಎಂದು ಹೇಳಿದರು.
ನಾವು ಎಷ್ಟು ಮುಂಜಾಗ್ರತೆ ಕ್ರಮ ವಹಿಸುತ್ತೇವೋ ಅಥವಾ ಈ ನಿಯಮವನ್ನು ಪಾಲಿಸುತ್ತೇವೆ ಅಷ್ಟು ನಮಗೆ ಕೊರೊನಾ ದಿಂದ ಸುರಕ್ಷತೆ ಸಿಗುತ್ತದೆ ಎಂದು ಅವರು ಹೇಳಿದರು.ಸರ್ಕಾರ ನೀಡುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಹಬ್ಬಹರಿದಿನಗಳಂದು ಜನರು ಗುಂಪುಗೂಡುವುದು ಮತ್ತು ಊರಿಗೆ ತೆರಳುವುದು ಸೂಕ್ತವಲ್ಲ . ಇನ್ನೂ ಕನಿಷ್ಠ ಪಕ್ಷ 6ತಿಂಗಳಾದರೂ ನಾವು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ಕೈಗಳನ್ನು ತೊಳೆಯುವುದು ಸ್ಯಾನಿಟೈಸರ್ ಬಳಸುವುದು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಒತ್ತಿ ಹೇಳಿದರು.
ಕೊರೋನಾ 3ನೇ ಅಲೆ ತಡೆಗಟ್ಟಲು ಎಲ್ಲರೂ ಕೈ ಜೋಡಿಸಬೇಕಿದೆ ; ಡಾ.ಸಿ.ಎನ್.ಮಂಜುನಾಥ್
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.