ಬೆಂಗಳೂರು

ಒಂದೇ ಕುಟುಂಬದ ಮೂವರ ಕೌಟುಂಬಿಕ ಆತ್ಮಹತ್ಯೆ

ನೆಲಮಂಗಲ: ಬೆಂಗಳೂರಿನಲ್ಲಿ ಬೀಕರ ಕೌಟುಂಬಿಕ ಆತ್ಮಹತ್ಯೆ ದುರಂತ ನಡೆದಿದೆ. ನೆಲಮಂಗಲದ ಮಾದನಾಯಕನಹಳ್ಳಿ ಸಮೀಪದ ಪ್ರಕೃತಿ ಬಡಾವಣೆ ತಾಯಿ, ಮಗ ಮತ್ತು ಮಗಳು ನೇಣು ಹಾಕಿಕೊಂಡು ಸಾವಿಗೀಡಾದ ಘಟನೆ ನಡೆದಿದೆ.

ಪತಿಯ ಸಾವಿನಿಂದ ಖಿನ್ನರಾಗಿದ್ದ ವಸಂತ (40), ಮಗ ಯಶವಂತ್ (15) ಮತ್ತು ನಿಶ್ಚಿತಾ (6) ಸಾವಿಗೆ ಶರಣಾದ ದುರ್ದೈವಿಗಳು. ‌ಇತ್ತೇಚೆಗಷ್ಟೆ ನಗರದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟ ಮನಕಲಕುವ ಘಟನೆ ನಡೆದಿತ್ತು.

ಪೀಣ್ಯ ಡಿಪೋದಲ್ಲಿ ಬಿಎಂಟಿಸಿ ನಿರ್ವಾಹಕ-ಚಾಲಕರಾಗಿದ್ದ ಪ್ರಸನ್ನ ಕುಮಾರ್ ಅವರು ಕಳೆದ ವರ್ಷ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದರು. ಪತಿಯ ಸಾವಿನ ಬಳಿಕ ಪತ್ನಿ ವಸಂತ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಜತೆಗೆ ಗಂಡ ಹೆಂಡತಿ ಇಬ್ಬರೂ ಬ್ಯಾಂಕ್ ಮತ್ತು ಕೈಸಾಲಗಳನ್ನು ಮಾಡಿ ಕನಸಿನ ಮನೆ ಕಟ್ಟಿಸಿದ್ದರು. ಪತಿ ಸಾವಿನ ಬಳಿಕ ದಿಕ್ಕೆಟ್ಟ ವಸಂತ ಅವರಿಗೆ ಸಾಲ ತೀರಿಸುವ ಮತ್ತು ಮಕ್ಕಳನ್ನು ಬೆಳೆಸುವ ದಾರಿ ತೋಚದೆ ಕಂಗಾಲಾಗಿದ್ದರು.

ಮೈಸೂರಿನ ಪಿರಿಯಾಪಟ್ಟಣ ಮೂಲದ ಈ ಕುಟುಂಬ, ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿತ್ತು. ಮನೆ ಕಟ್ಟಲು ಮಾಡಿದ್ದ ಲಕ್ಷಗಟ್ಟಲೆ ಸಾಲ ತೀರಿಸಲು ಮನೆ ಮಾರಾಟ ಮಾಡಲು ವಸಂತ ಉದ್ದೇಶಿಸಿದ್ದರು. ಆದರೆ ಶುಕ್ರವಾರ ಮಧ್ಯಾಹ್ನ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ಕೊಠಡಿಯಲ್ಲಿ ವಸಂತ ಮತ್ತು ನಿಶ್ಚಿಕಾ ಮೃತದೇಹ ಕಂಡುಬಂದಿದ್ದರೆ, ಇನ್ನೊಂದು ಕೊಠಡಿಯಲ್ಲಿ ಯಶವಂತ್ ದೇಹ ಪತ್ತೆಯಾಗಿದೆ.

ಪತಿ ಸಾವಿನ ಬಳಿಕ ಹತಾಶರಾಗಿದ್ದ ವಸಂತ ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರು. ಹೆಸರಘಟ್ಟ ಕೆರೆಗೆ ಹಾರಲು ಮಕ್ಕಳೊಂದಿಗೆ ತೆರಳಿದ್ದ ಅವರನ್ನು ಸ್ಥಳೀಯರು ತಡೆದು ಬುದ್ಧಿಮಾತು ಹೇಳಿದ್ದರು. ಇನ್ನೊಮ್ಮೆ ಆತ್ಮಹತ್ಯೆ ಪ್ರಯತ್ನ ಮಾಡುವುದಿಲ್ಲ ಎಂದು ಅವರು ಸಂಬಂಧಿಕರ ಮುಂದೆ ಹೇಳಿದ್ದರು ಎನ್ನಲಾಗಿದೆ.

ಸಹೋದರಿಗೆ ಧೈರ್ಯ ಇರಲಿ ಎಂದು ವಸಂತ ಅವರ ತಮ್ಮ ನಂದೀಶ್, ತಾಯಿ ತಾಯಮ್ಮ ಅವರನ್ನು ಅಕ್ಕನ ಮನೆಯಲ್ಲಿಯೇ ಬಿಟ್ಟಿದ್ದರು. ಆದರೆ ತಾಯಮ್ಮ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಅವರನ್ನು ನಂದೀಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಮಧ್ಯಾಹ್ನದ ಬಳಿಕ ಪದೇ ಪದೇ ಕರೆ ಮಾಡಿದ್ದರೂ ಅಕ್ಕ ರಿಸೀವ್ ಮಾಡದೆ ಇದ್ದಿದ್ದರಿಂದ ಗಾಬರಿಗೊಂಡಿದ್ದರು. ರಾತ್ರಿ 9 ಗಂಟೆಗೆ ಮನೆ ಬಳಿ ಬಂದಾಗ ಒಳಗಿನಿಂದ ಬಾಗಿಲು ಹಾಕಿರುವುದು ಗೊತ್ತಾಯಿತು. ಕೂಡಲೇ ಅವರು ಸ್ಥಳೀಯರಿಗೆ ಮಾಹಿತಿ ನೀಡಿದರು. ಬಳಿಕ ಏಣಿ ಇಟ್ಟು ಮೇಲಿನ ಮಹಡಿ ಮೂಲಕ ಒಳಗೆ ಹೋಗಿ ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ವಸಂತ ಅವರು ಮೂರು ಪುಟಗಳ ಡೆತ್ ನೋಟ್ ಬರೆದಿದ್ದು, ಯಾರಿಗೆ ಯಾರೂ ಇಲ್ಲ ಎನ್ನುವುದು ಗೊತ್ತಾಗಿದೆ. ನನ್ನ ಪತಿ ಇಲ್ಲದೆ ನಾನಿದ್ದರೂ ಸತ್ತಂತೆ, ಸಾಲ ಕೊಟ್ಟವರಿಗೆ ಮೋಸ ಆಗಬಾರದು ಎಂದು ಗಟ್ಟಿ ಮನಸ್ಸು ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆ. ಸಾಲದ ಜತೆಗೆ ಮಕ್ಕಳ ಜವಾಬ್ದಾರಿ ಇತ್ತು. ಆದರೆ ಪತಿ ಇಲ್ಲದೆ ಬದುಕಲು ಆಗುತ್ತಿಲ್ಲ ಎಂದು ಅದರಲ್ಲಿ ಬರೆದಿದ್ದಾರೆ.

ಭಾವ ತೀರಿ ಹೋದ ಬಳಿಕ ಅಕ್ಕ ತುಂಬಾ ನೋವಿನಿಂದ ಇದ್ದಳು. ತನಗೆ ಬದುಕುವ ಆಸೆ ಇಲ್ಲ ಎಂದು ನಮ್ಮ ಬಳಿ ಕೂಡ ಹೇಳಿದ್ದಳು. ನಾವು ಅವಳಿಗೆ ಸಮಾಧಾನ ಹೇಳಿದ್ದೆವು. ನಾನು ಕೂಡ ಕೆಲಸ ಬಿಟ್ಟು ಐದು ತಿಂಗಳು ಅವರ ಜತೆಗಿದ್ದೆ. ಎಲ್ಲವೂ ಸಹಜವಾಗುತ್ತಿತ್ತು. ಆದರೆ ಎರಡು ತಿಂಗಳ ಹಿಂದೆಯಿಂದ ಮತ್ತೆ ಖಿನ್ನಳಾಗಿದ್ದಳು. ಸಾಲದ ಬಗ್ಗೆ ತುಂಬಾ ಯೋಚನೆಯಾಗಿತ್ತು. ಸಂಸ್ಥೆಯಿಂದ ಹೆಚ್ಚು ಪರಿಹಾರದ ಹಣ ಬಂದಿರಲಿಲ್ಲ ಎಂದು ಮೃತ ವಸಂತ ಅವರ ತಮ್ಮ ನಂದೀಶ್ ತಿಳಿಸಿದ್ದಾರೆ.

Swathi MG

Recent Posts

ಮೀನಾ ಹತ್ಯೆ ಪ್ರಕರಣ: ವಿಶೇಷ ನ್ಯಾಯಾಲಯ ತೆರೆಯಲು ಕ್ರಮ

ಬಾಲಕಿಯನ್ನು ಹತ್ಯೆ ಮಾಡಿರುವ ಕೃತ್ಯ ಸಹಿಸಲಾಗುವುದಿಲ್ಲ. ಬಾಲಕಿಯ ಕುಟುಂಬಕ್ಕೆ ನ್ಯಾಯ  ಒದಗಿಸುವ ನಿಟ್ಟಿನಲ್ಲಿ  ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.…

12 mins ago

ಕೇಸೋರಾಮ್ ಇಂಡಸ್ಟ್ರೀಸ್ ಮುಖ್ಯಸ್ಥೆ ಮಂಜುಶ್ರೀ ಖೇತಾನ್ ವಿಧಿವಶ

ಬಿಕೆ ಬಿರ್ಲಾ ಒಡೆತನದ ಕೇಸೋರಾಮ್ ಇಂಡಸ್ಟ್ರೀಸ್ ಸಂಸ್ಥೆಯ ಛೇರ್ಮನ್ ಆಗಿದ್ದ ಮಂಜುಶ್ರೀ ಖೇತಾನ್ ನಿಧನರಾಗಿದ್ದಾರೆ.

14 mins ago

ಡಿವೈಡರ್‌ಗೆ ಡಿಕ್ಕಿ ಹೊಡೆದು ಬೈಕ್‌ ಸವಾರ ಮೃತ್ಯು

ಭೀಕರ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸಾವನ್ನಪ್ಪಿದ ಘಟನೆ ಬೆಂಗಳೂರಲ್ಲಿ ನಡೆದಿದೆ.

22 mins ago

ಎಸ್‌ಎಸ್‌ಎಲ್‌ಸಿ ಗ್ರೇಸ್ ಮಾರ್ಕ್ಸ್‌ ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧಾರ

ಈ ಬಾರಿಯ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಶೇಕಡಾ 20ರಷ್ಟು ಗ್ರೇಸ್‌ ಮಾರ್ಕ್ಸ್ ಕೊಟ್ಟು ವಿದ್ಯಾರ್ಥಿಗಳನ್ನ ಪಾಸ್ ಮಾಡಿದ್ದು…

25 mins ago

ಅಡುಗೆ ಮಾಡುತಿದ್ದ ವೇಳೆ ಗ್ಯಾಸ್‌ ಸಿಲಿಂಡರ್ ಸ್ಫೋಟ: ಮನೆಯ ವಸ್ತುಗಳು ಬೆಂಕಿಗಾಹುತಿ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ನಂದನಗದ್ದಾದಲ್ಲಿ ಮನೆಯಲ್ಲಿ ಅಡುಗೆ ಮಾಡುತಿದ್ದ ವೇಳೆ ಗ್ಯಾಸ್‌ ಸಿಲಿಂಡರ್ ಸ್ಫೋಟಗೊಂಡ ಘಟನೆ ನಡೆದಿದೆ.

33 mins ago

ಪಂದ್ಯದ ವೇಳೆ ಮಳೆ ಬಾರದಂತೆ ಆರ್​ಸಿಬಿ ಆಟಗಾರರಿಂದ ಕೃಷ್ಣ ನಾಮ ಜಪ

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ನಾಳೆ ನಡೆಯುವ ಮಹತ್ವದ ಪಂದ್ಯದಲ್ಲಿ ಆರ್​ಸಿಬಿ ಕಣಕ್ಕಿಳಿಯಲು ಸಜ್ಜಾಗಿ ನಿಂತಿದ್ದರೂ ಕೂಡ ಪಂದ್ಯಕ್ಕೆ ಮಳೆ…

41 mins ago