News Karnataka Kannada
Thursday, May 02 2024
ಬೆಂಗಳೂರು

ಒಂದೇ ಕುಟುಂಬದ ಮೂವರ ಕೌಟುಂಬಿಕ ಆತ್ಮಹತ್ಯೆ

Death Body 08082021
Photo Credit :

ನೆಲಮಂಗಲ: ಬೆಂಗಳೂರಿನಲ್ಲಿ ಬೀಕರ ಕೌಟುಂಬಿಕ ಆತ್ಮಹತ್ಯೆ ದುರಂತ ನಡೆದಿದೆ. ನೆಲಮಂಗಲದ ಮಾದನಾಯಕನಹಳ್ಳಿ ಸಮೀಪದ ಪ್ರಕೃತಿ ಬಡಾವಣೆ ತಾಯಿ, ಮಗ ಮತ್ತು ಮಗಳು ನೇಣು ಹಾಕಿಕೊಂಡು ಸಾವಿಗೀಡಾದ ಘಟನೆ ನಡೆದಿದೆ.

ಪತಿಯ ಸಾವಿನಿಂದ ಖಿನ್ನರಾಗಿದ್ದ ವಸಂತ (40), ಮಗ ಯಶವಂತ್ (15) ಮತ್ತು ನಿಶ್ಚಿತಾ (6) ಸಾವಿಗೆ ಶರಣಾದ ದುರ್ದೈವಿಗಳು. ‌ಇತ್ತೇಚೆಗಷ್ಟೆ ನಗರದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟ ಮನಕಲಕುವ ಘಟನೆ ನಡೆದಿತ್ತು.

ಪೀಣ್ಯ ಡಿಪೋದಲ್ಲಿ ಬಿಎಂಟಿಸಿ ನಿರ್ವಾಹಕ-ಚಾಲಕರಾಗಿದ್ದ ಪ್ರಸನ್ನ ಕುಮಾರ್ ಅವರು ಕಳೆದ ವರ್ಷ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದರು. ಪತಿಯ ಸಾವಿನ ಬಳಿಕ ಪತ್ನಿ ವಸಂತ ತೀವ್ರ ಖಿನ್ನತೆಗೆ ಒಳಗಾಗಿದ್ದರು. ಜತೆಗೆ ಗಂಡ ಹೆಂಡತಿ ಇಬ್ಬರೂ ಬ್ಯಾಂಕ್ ಮತ್ತು ಕೈಸಾಲಗಳನ್ನು ಮಾಡಿ ಕನಸಿನ ಮನೆ ಕಟ್ಟಿಸಿದ್ದರು. ಪತಿ ಸಾವಿನ ಬಳಿಕ ದಿಕ್ಕೆಟ್ಟ ವಸಂತ ಅವರಿಗೆ ಸಾಲ ತೀರಿಸುವ ಮತ್ತು ಮಕ್ಕಳನ್ನು ಬೆಳೆಸುವ ದಾರಿ ತೋಚದೆ ಕಂಗಾಲಾಗಿದ್ದರು.

ಮೈಸೂರಿನ ಪಿರಿಯಾಪಟ್ಟಣ ಮೂಲದ ಈ ಕುಟುಂಬ, ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿತ್ತು. ಮನೆ ಕಟ್ಟಲು ಮಾಡಿದ್ದ ಲಕ್ಷಗಟ್ಟಲೆ ಸಾಲ ತೀರಿಸಲು ಮನೆ ಮಾರಾಟ ಮಾಡಲು ವಸಂತ ಉದ್ದೇಶಿಸಿದ್ದರು. ಆದರೆ ಶುಕ್ರವಾರ ಮಧ್ಯಾಹ್ನ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ಕೊಠಡಿಯಲ್ಲಿ ವಸಂತ ಮತ್ತು ನಿಶ್ಚಿಕಾ ಮೃತದೇಹ ಕಂಡುಬಂದಿದ್ದರೆ, ಇನ್ನೊಂದು ಕೊಠಡಿಯಲ್ಲಿ ಯಶವಂತ್ ದೇಹ ಪತ್ತೆಯಾಗಿದೆ.

ಪತಿ ಸಾವಿನ ಬಳಿಕ ಹತಾಶರಾಗಿದ್ದ ವಸಂತ ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದರು. ಹೆಸರಘಟ್ಟ ಕೆರೆಗೆ ಹಾರಲು ಮಕ್ಕಳೊಂದಿಗೆ ತೆರಳಿದ್ದ ಅವರನ್ನು ಸ್ಥಳೀಯರು ತಡೆದು ಬುದ್ಧಿಮಾತು ಹೇಳಿದ್ದರು. ಇನ್ನೊಮ್ಮೆ ಆತ್ಮಹತ್ಯೆ ಪ್ರಯತ್ನ ಮಾಡುವುದಿಲ್ಲ ಎಂದು ಅವರು ಸಂಬಂಧಿಕರ ಮುಂದೆ ಹೇಳಿದ್ದರು ಎನ್ನಲಾಗಿದೆ.

ಸಹೋದರಿಗೆ ಧೈರ್ಯ ಇರಲಿ ಎಂದು ವಸಂತ ಅವರ ತಮ್ಮ ನಂದೀಶ್, ತಾಯಿ ತಾಯಮ್ಮ ಅವರನ್ನು ಅಕ್ಕನ ಮನೆಯಲ್ಲಿಯೇ ಬಿಟ್ಟಿದ್ದರು. ಆದರೆ ತಾಯಮ್ಮ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಅವರನ್ನು ನಂದೀಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಮಧ್ಯಾಹ್ನದ ಬಳಿಕ ಪದೇ ಪದೇ ಕರೆ ಮಾಡಿದ್ದರೂ ಅಕ್ಕ ರಿಸೀವ್ ಮಾಡದೆ ಇದ್ದಿದ್ದರಿಂದ ಗಾಬರಿಗೊಂಡಿದ್ದರು. ರಾತ್ರಿ 9 ಗಂಟೆಗೆ ಮನೆ ಬಳಿ ಬಂದಾಗ ಒಳಗಿನಿಂದ ಬಾಗಿಲು ಹಾಕಿರುವುದು ಗೊತ್ತಾಯಿತು. ಕೂಡಲೇ ಅವರು ಸ್ಥಳೀಯರಿಗೆ ಮಾಹಿತಿ ನೀಡಿದರು. ಬಳಿಕ ಏಣಿ ಇಟ್ಟು ಮೇಲಿನ ಮಹಡಿ ಮೂಲಕ ಒಳಗೆ ಹೋಗಿ ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ವಸಂತ ಅವರು ಮೂರು ಪುಟಗಳ ಡೆತ್ ನೋಟ್ ಬರೆದಿದ್ದು, ಯಾರಿಗೆ ಯಾರೂ ಇಲ್ಲ ಎನ್ನುವುದು ಗೊತ್ತಾಗಿದೆ. ನನ್ನ ಪತಿ ಇಲ್ಲದೆ ನಾನಿದ್ದರೂ ಸತ್ತಂತೆ, ಸಾಲ ಕೊಟ್ಟವರಿಗೆ ಮೋಸ ಆಗಬಾರದು ಎಂದು ಗಟ್ಟಿ ಮನಸ್ಸು ಮಾಡಿಕೊಂಡು ಜೀವನ ಸಾಗಿಸುತ್ತಿದ್ದೆ. ಸಾಲದ ಜತೆಗೆ ಮಕ್ಕಳ ಜವಾಬ್ದಾರಿ ಇತ್ತು. ಆದರೆ ಪತಿ ಇಲ್ಲದೆ ಬದುಕಲು ಆಗುತ್ತಿಲ್ಲ ಎಂದು ಅದರಲ್ಲಿ ಬರೆದಿದ್ದಾರೆ.

ಭಾವ ತೀರಿ ಹೋದ ಬಳಿಕ ಅಕ್ಕ ತುಂಬಾ ನೋವಿನಿಂದ ಇದ್ದಳು. ತನಗೆ ಬದುಕುವ ಆಸೆ ಇಲ್ಲ ಎಂದು ನಮ್ಮ ಬಳಿ ಕೂಡ ಹೇಳಿದ್ದಳು. ನಾವು ಅವಳಿಗೆ ಸಮಾಧಾನ ಹೇಳಿದ್ದೆವು. ನಾನು ಕೂಡ ಕೆಲಸ ಬಿಟ್ಟು ಐದು ತಿಂಗಳು ಅವರ ಜತೆಗಿದ್ದೆ. ಎಲ್ಲವೂ ಸಹಜವಾಗುತ್ತಿತ್ತು. ಆದರೆ ಎರಡು ತಿಂಗಳ ಹಿಂದೆಯಿಂದ ಮತ್ತೆ ಖಿನ್ನಳಾಗಿದ್ದಳು. ಸಾಲದ ಬಗ್ಗೆ ತುಂಬಾ ಯೋಚನೆಯಾಗಿತ್ತು. ಸಂಸ್ಥೆಯಿಂದ ಹೆಚ್ಚು ಪರಿಹಾರದ ಹಣ ಬಂದಿರಲಿಲ್ಲ ಎಂದು ಮೃತ ವಸಂತ ಅವರ ತಮ್ಮ ನಂದೀಶ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು