ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯುವತಿ ಮೇಲೆ ಆಸಿಡ್ ದಾಳಿ ನಡೆದಿದೆ. ಸುಂಕದಕಟ್ಟೆಯ ಮುತ್ತೂಟ್ ಫಿನ್ ಕಾರ್ಪ್ ಬಳಿ 23 ವರ್ಷದ ಯುವತಿ ಮೇಲೆ ಆಯಸಿಡ್ ಅಟ್ಯಾಕ್ ಆಗಿದೆ. ಈಗ ಆಯಸಿಡ್ ದಾಳಿಗೆ ಒಳಗಾದ ಸಂತ್ರಸ್ತೆ ನೆರವಿಗೆ ಸಚಿವ ವಿ. ಸೋಮಣ್ಣ ಪುತ್ರ ಅರುಣ್ ಸೋಮಣ್ಣ ಧಾವಿಸಿದ್ದಾರೆ.
ಈ ಸಂಬಂಧ ನ್ಯೂಸ್ಫಸ್ಟ್ ಜತೆಗೆ ಮಾತಾಡಿದ ಅರುಣ್ ಸೋಮಣ್ಣ, ಸಂತ್ರಸ್ತೆ ಬೇಗ ಗುಣಮುಖರಾಗಿ ಮೊದಲಿನಂತಾಗಲಿ.ಆಯಸಿಡ್ ದಾಳಿ ಪ್ರಕರಣವನ್ನು ಸಿಎಂ ಕೂಡ ಖಂಡಿಸಿದ್ದಾರೆ. ಸರ್ಕಾರದಿಂದಲೂ ಸಂತ್ರಸ್ತ ಯುವತಿಗೆ ನೆರವು ಕೊಡಿಸುವೆ. ಇಂತಹ ಪ್ರಕರಣಗಳ ಬಗ್ಗೆ ಸಮಾಜ ಪ್ರಶ್ನೆ ಮಾಡಿಕೊಳ್ಳಬೇಕಿದೆ. ಸಂತ್ರಸ್ತೆಯ ಚಿಕಿತ್ಸಾ ವೆಚ್ಚವನ್ನು ನಾನು ಭರಿಸುವೆ ಎಂದರು.