ವಿಜಯಪುರ: ಸನಾತನ ಧರ್ಮ ವಿಚಾರ ಇದೀಗ ದೇಶದೆಲ್ಲೆಡೆ ಚರ್ಚೆಗೆ ಕಾರಣವಾಗಿದೆ. ರಾಜಕಾರಣಿಗಳು, ನಟರು, ಧಾರ್ಮಿಕ ಮುಖಂಡರು ಪರ, ವಿರೋಧ ಹೇಳಿಕೆ ನೀಡುತ್ತಿದ್ದಾರೆ. ಅದೇ ರೀತಿ ಮಾಜಿ ಸಚಿವ, ಬಿಜೆಪಿ ಮುಖಂಡ ಈಶ್ವರಪ್ಪ ಸನಾತನ ಧರ್ಮದ ಕುರಿತು ಹೇಳಿಕೆ ನೀಡಿದ್ದ ಪ್ರಕಾಶ್ ರಾಜ್ ಕುರಿತು ಮಾತನಾಡಿದ್ದಾರೆ.
ಪ್ರಕಾಶ್ ರಾಜ್ ಅಯೋಗ್ಯ, ಅಪ್ಪ-ಅಮ್ಮಂಗೆ ಹುಟ್ಟಿದೀನಿ ಅಂತಾನೆ. ಅಪ್ಪ-ಅಮ್ಮಂಗೆ ಹುಟ್ಟಿದಾನೇ ಅನ್ನೋಕೆ ಗ್ಯಾರಂಟಿ ಏನು? ನನಗೆ ಅವರ ಅಮ್ಮನ ಬಗ್ಗೆ ಗೌರವ ಇದೆ. ಅವರ ಅಪ್ಪ ಯಾರು ಎಂದು ಕೇಳಿದ್ದಾನಾ? ಆದ್ರೆ, ಇವರೇ ಅಪ್ಪ ಎಂದು ಅವರ ತಾಯಿ ಹೇಳಿದಾಗ ಈತನಿಗೆ ಅಪ್ಪ ಅನ್ನೋದು ಗೊತ್ತಾಗಿದೆ ತಾನೇ ಎಂದು ಹೇಳಿದರು.
ಪ್ರಪಂಚಕ್ಕೆ ಶಾಂತಿ, ಧರ್ಮವನ್ನು ಹೇಳಿದ್ದು ಭಾರತ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಅಂತಾ ಹೇಳಿದ್ದಾರೆ. ಮಾಡ್ತಾ ಇರೋದೆಲ್ಲಾ ಹಲಕಟ್ ಗಿರಿ. ಶಾಂತಿ ಕದಡಿಸೋದೆ ಅವರ ಕೆಲಸ. ಮುಸ್ಲಿಂರಿಗೆ ನೋವು ಮಾಡಿ ಅಂತಾ ಹೇಳಲ್ಲ. ಕುರಾನ್ ಬಗ್ಗೆ, ಮುಸ್ಲಿಮರು ಎಲ್ಲಿ, ಯಾವಾಗ ಹುಟ್ಟಿದ್ದು ಅಂತಾ ಪ್ರಶ್ನೆ ಕೇಳಲಿ ನೋಡೋಣ, ಅವರನ್ನು ಕೆಣಕಿ ನೋಡಲಿ ಇವರು. ಮಾತನಾಡಬೇಕಾದ್ರೆ ಮೈಮೇಲೆ ಜ್ಞಾನ ಇಟ್ಟುಕೊಂಡು ಮಾತನಾಡಬೇಕು ಎಂದು ಕಿಡಿಕಾರಿದರು.