ವಿಜಯಪುರ: ಜಿಲ್ಲೆಯ ಯುವಕನೊಬ್ಬನಿಗೆ ವಂಚನೆ ಮಾಡಲಾಗಿದ್ದು, ಫೇಸ್ ಬುಕ್ ನಲ್ಲಿ ಪರಿಚಯವಾದ ಬಳಿಕ ಮದುವೆಯಾಗುವ ನೆಪದಲ್ಲಿ ಆನ್ ಲೈನ್ ನಲ್ಲಿ 39 ಲಕ್ಷ ರೂ. ವಂಚನೆ ಮಾಡಿದ್ದ ಹಾಸನ ಜಿಲ್ಲೆಯ ಗೃಹಿಣಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ದಾಸರಹಳ್ಳಿ ಮೂಲದ ಕೆ.ಆರ್.ಮಂಜುಳಾ ಸ್ವಾಮಿ ಬಂಧಿತ ಗೃಹಿಣಿ. ಪ್ರಕರಣದ ಇನ್ನೋರ್ವ ಆರೋಪಿ ಸ್ವಾಮಿ ಬಸವರಾಜ್ ಎಂಬಾತ ತನ್ನ ಪತ್ನಿಗೆ ವಂಚನೆಗೆ ಸಹಕರಿಸಿದ್ದ.
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬಾಗಲೂರು ಗ್ರಾಮದ ಪರಮೇಶ್ವರ ನಾನಾಗೌಡ ಹಿಪ್ಪರಗಿ ಎಂಬಾತ ಗೃಹಿಣಿಯಿಂದ ವಂಚನೆಗೊಳಗಾದ ವ್ಯಕ್ತಿ.