ವಿಜಯಪುರ: ವಿಜಯಪುರ: ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರ ಉಚಿತ ಎಲ್ಪಿಜಿ ಸಂಪರ್ಕವನ್ನು ನೀಡಿದೆ. ಒಟ್ಟಾರೆ 9 ಕೋಟಿ ಜನರು ಉಚಿತ ಎಲ್ಪಿಜಿ ಸಂಪರ್ಕ ಪಡೆದಿದ್ದಾರೆ. ಆದರೆ, ಗ್ಯಾಸ್ ಸ್ಟೌ ಬಳಸುವಾಗ ಕೈಗೊಳ್ಳುವ ಸುರಕ್ಷತಾ ಕ್ರಮಗಳ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದು ವಿತರಕ ನಟರಾಜ್ ಹೇಳಿದರು.
ಪಟ್ಟಣದ ವಿಜಯ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಎಲ್ ಪಿಜಿ ಸುರಕ್ಷಿತ ಬಳಕೆ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಅನಿಲ ಬಳಕೆ ಮತ್ತು ಉಳಿತಾಯ ಮುಖ್ಯವಾಗಿದೆ. ಪ್ರತಿಯೊಬ್ಬ ಮಹಿಳೆಯರು ಸುರಕ್ಷತಾ ಕ್ರಮಗಳು ಮತ್ತು ಸಾಮಾನ್ಯ ತಪ್ಪುಗಳನ್ನು ಸರಿಪಡಿಸುವ ಮಾರ್ಗಗಳನ್ನು ಕಲಿಯಬೇಕು” ಎಂದು ಅವರು ಹೇಳಿದರು.
“ಗ್ಯಾಸ್ ಸಿಲಿಂಡರ್ನಲ್ಲಿ ತುಂಬಿದ ಅನಿಲವನ್ನು ರಾಸಾಯನಿಕವನ್ನು ಬಳಸಿ ವಾಸನೆ ಬರುವಂತೆ ಮಾಡುವುದು ಭಾರತದಲ್ಲಿ ಮಾತ್ರ. ಸಿಲಿಂಡರ್ ಸೋರಿಕೆಯ ಸಂದರ್ಭದಲ್ಲಿ, ವಾಸನೆಯಿಂದಲೇ ಜಾಗೃತರಾಗಬಹುದು ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು” ಎಂದು ಅವರು ಹೇಳಿದರು.