ವಿಜಯಪುರ: ಸಿಎಂ ಆಗಿ ಸಿದ್ದರಾಮಯ್ಯ ಸಮರ್ಥವಾಗಿ ಸರ್ಕಾರವನ್ನು ಮುನ್ನಡೆಸುತ್ತಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಕೆಲಸಕ್ಕೆ ಬಾರದವರ ಹೇಳಿಕೆಗೆ ಆದ್ಯತೆ ನೀಡಬೇಕಿಲ್ಲ. ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ ಮಹದೇವಪ್ಪ ಹೇಳಿದ್ದಾರೆ.
ಸೋಮವಾರ ಇಂಡಿ ತಾಲೂಕಿನ ಹಳಗಣಕಿ ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ನಮ್ಮ ಪಕ್ಷದಲ್ಲಿ ಯಾವುದೇ ಬಣ ಇಲ್ಲ. ಇರುವುದೊಂದೆ ಕಾಂಗ್ರೆಸ್ ಬಣ. ಮುಖ್ಯಮಂತ್ರಿ ಬದಲಾವಣೆ ಎಂದೆಲ್ಲ ಕೆಲಸಕ್ಕೆ ಬಾರದವರು ಚರ್ಚೆ ಮಾಡುತ್ತಾರೆ ಎಂದರು.