ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ನಾದ ಕೆಡಿ ಕ್ರಾಸ್ ದಿಂದ ಶಿರಶ್ಯಾಡ ಗ್ರಾಮದವರೆಗೆ 2023 ನೇ ಸಾಲಿನಲ್ಲಿ ರಸ್ತೆ ಡಾಂಬರೀಕರಣಕ್ಕೆ ಅನುದಾನ ಮಂಜೂರಾಗಿದ್ದು, ಪ್ರಸ್ತುತ ಕಾಮಗಾರಿ ಗುತ್ತಿಗೆದಾರ ಪ್ರಾರಂಭ ಮಾಡಿದ್ದಾರೆ. ಆದರೆ ಕಾಮಗಾರಿ ಕಳಪೆಯಾಗಿದ್ದು, ಗುತ್ತಿಗೆದಾರನಿಗೆ ವಿಚಾರಿಸಿದಾಗ ಸರಿಯಾಗಿ ಸ್ಪಂದನೆ ಮಾಡಿಲ್ಲ.
ಸಂಬಂಧಿಸಿದ ಎಇಇ ಅವರಿಗೆ ಫೋನ್ ಕರೆ ಮಾಡಿದಾಗ ಸಾವ೯ಜನಿಕರಿಗೆ ಕೆಲವು ಗಂಟೆಗಳ ಕಾಲ ಸತಾಯಿಸಿದ ಘಟನೆ ನಡೆದಿದೆ.ಕೊನೆಗೆ ರಸ್ತೆ ಎಸ್ಟೀಮೇಟ್ ಪ್ರಕಾರ ಕಾಮಗಾರಿ ನಡೆಯುವ ವರೆಗೂ ನಾವು ಸ್ಥಳದಿಂದ ಹೋಗುವುದಿಲ್ಲ ಎಂದು ಜನರು ಪಟ್ಟುಹಿಡಿದರು.
ಈ ಸಂದರ್ಭದಲ್ಲಿ ಚಂದ್ರಕಾಂತ ಪಾಸೋಡಿ.ರಾಘವೇಂದ್ರ ಬಿಲ್ಲಾಡ.ಪುಂಡಲಿಕ ತಡ್ಲಿಗಿ.ರಾಘವೇಂದ್ರ ತಡ್ಲಿಗಿ.ವಿನೋದರ ಬಿರಾದಾರ.ದಾದು ಕೋಣಸಿರಸಗಿ .ಉಮೇಶ್ ಮುಳುಜಿ.ರಾಘವೇಂದ್ರ ದೇವರಮನಿ .ಇತರರು ಸ್ಥಾನಿಕವಾಗಿದ್ದರು.