News Karnataka Kannada
Tuesday, May 07 2024
ವಿಜಯಪುರ

ಮೋದಿ ಕೋಟ್ಯಧಿಪತಿಗಳಿಗೆ ಕೊಟ್ಟ ಹಣವನ್ನು ತಂದು ರೈತರಿಗೆ ಹಂಚುವುದು ನಮ್ಮ ಯೋಚನೆ: ರಾಹುಲ್‌ ಗಾಂಧಿ

ಮೋದಿ ಅವರು ಕೋಟ್ಯಧಿಪತಿಗಳಿಗೆ ಕೊಟ್ಟಿರುವ ಹಣವನ್ನು ತಂದು ರೈತರಿಗೆ ಹಂಚಲು ಯೋಚಿಸಿದ್ದೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.
Photo Credit : NewsKarnataka

ವಿಜಯಪುರ: ಮೋದಿ ಅವರು ಕೋಟ್ಯಧಿಪತಿಗಳಿಗೆ ಕೊಟ್ಟಿರುವ ಹಣವನ್ನು ತಂದು ರೈತರಿಗೆ ಹಂಚಲು ಯೋಚಿಸಿದ್ದೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಅವರು ವಿಜಯಪುರದಲ್ಲಿಂದು ಕಾಂಗ್ರೆಸ್ ಅಭ್ಯರ್ಥಿ ಚುನಾವಣಾ ಪ್ರಚಾರ ನಡೆಸಿದ ರಾಹುಲ್ ಗಾಂಧಿ, ಕೈ ಅಭ್ಯರ್ಥಿ ರಾಜು ಅಲಗೂರ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಬಳಿಕ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ 20 ಮಂದಿ ಶ್ರೀಮಂತರನ್ನ ಮಾತ್ರ ಬೆಳೆಸಿದೆ. ಅದಾನಿ ಅವರಿಗೆ ಭಾರತದ ದೊಡ್ಡ ದೊಡ್ಡ ಯೋಜನೆಗಳನ್ನ ಕೊಟ್ಟಿದ್ದಾರೆ. ಬಡವರಿಗೆ ಏನು ಕೊಟ್ಟಿದ್ದಾರೆ? ಆದ್ರೆ‌ ನಮ್ಮ ಕಾಂಗ್ರೆಸ್‌ ಸರ್ಕಾರ ಕರ್ನಾಟಕದಲ್ಲಿ ಬಡವರಿಗಾಗಿ 5 ಗ್ಯಾರಂಟಿಗಳನ್ನು ಕೊಟ್ಟಿದೆ. ಆದರಿಂದ ಸಾಕಷ್ಟು ಉಪಯೋಗ ಆಗಿದೆ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರ ಈಗ ಕೋಟ್ಯಧಿಪತಿಗಳನ್ನು ಲಕ್ಷಾಧಿಪತಿಗಳಾಗಿ ಮಾಡಲು ಹೊರಟಿದೆ. ಎಷ್ಟು ಹಣ ಮೋದಿ ಅವರು ಈ ಕೋಟ್ಯಧಿಪತಿಗಳಿಗೆ ಕೊಟ್ಟಿದ್ದಾರೋ ಅದನ್ನ ರೈತರಿಗೆ ಕೊಡಲು ಯೋಚಿಸಿದ್ದೇವೆ.

ಬಡವರು ಆರ್ಥಿಕವಾಗಿ ಸಬಲರಾಗುವವರೆಗೂ ಅವರಿಗೆ ಹಣ ಕೊಡುತ್ತೇವೆ. ಮೋದಿಯವರು ಕೋಟ್ಯಾಧೀಶರಿಗೆ ಕೆಲಸ ಕೊಟ್ಟು, ಬಡವರಿಗೆ ಅನ್ಯಾಯ ಮಾಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಿದೆ. ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುವಂತೆ ಮಾಡುತ್ತೇವೆ.

ಪ್ರಧಾನಿ ಮೋದಿಗೆ ಈಗಾಗಲೇ ಭಯ ಶುರುವಾಗಿದೆ. ಅದಕ್ಕಾಗಿ ಅವರು ಬೇರೆ-ಬೇರೆ ವಿಚಾರ ಮಾತನಾಡ್ತಾರೆ. ಒಮ್ಮೆ ಚೀನಾ ಮತ್ತೊಮ್ಮೆ ಪಾಕಿಸ್ತಾನದ ಬಗ್ಗೆ ಮಾತನಾಡಿ ದಿಕ್ಕು ತಪ್ಪಿಸುತ್ತಾರೆ. ಭಾರತದಲ್ಲಿ ಎದುರಿಸಬೇಕಾದ ಸವಾಲುಗಳು ಅನೇಕ ಇವೆ.

ಕಳೆದ 10 ವರ್ಷಗಳಲ್ಲಿ ಬಡವರನ್ನು ಉದ್ಧಾರ ಮಾಡಿದ್ದೇವೆ ಎಂದು ಹೇಳುವ ಮೋದಿ ಬಡವರಿಂದಲೇ ಹಣ ಕಸಿದುಕೊಂಡಿದ್ದಾರೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು