ವಿಜಯಪುರ: ನಿಡಗುಂದಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 50ರ ಬಸವನಬಾಗೇವಾಡಿ ಕ್ರಾಸ್ ಬಳಿ ಪ್ಲಾಸ್ಟಿಕ್ ಅಂಗಡಿಗಳಿಗೆ ಬೆಂಕಿ ತಗುಲಿ ಇಬ್ಬರು ಸಜೀವ ದಹನವಾದ ಘಟನೆ ಭಾನುವಾರ ನಸುಕಿನಲ್ಲಿ ಸಂಭವಿಸಿದೆ,ಪ್ರಾಥಮಿಕ ಮಾಹಿತಿಯ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದ ಬೆಂಕಿ ಹೊತ್ತಿರಬಹುದು ಎಂದು ತಿಳಿದುಬಂ ದಿದೆ.
ರಾಜಸ್ಥಾನ ಮೂಲದ ಅಶೋಕ ಭಿಷ್ಣೋಯಿ (25), ನಿಂಬಾರಾಯ ಬಿಷ್ಣೋಯಿ (35) ಸಜೀವವಾಗಿ ದಹನವಾಗಿದ್ದಾರೆ ಎಂದು ಗುರುತಿಸಲಾಗಿದೆ.ಹಲವು ವರ್ಷಗಳಿಂದ ಇವರು ಇಲ್ಲಿ ಪ್ಲಾಸ್ಟಿಕ್ ಅಂಗಡಿ ಇಟ್ಟು ಜೀವನ ಸಾಗಿಸುತ್ತಾರೆ.ಇಬ್ಬರೂ ನಿದ್ರೆಯಲ್ಲಿದ್ದರಿಂದ ಬೆಂಕಿ ತಗುಲಿದ್ದು ಗೊತ್ತಾಗಲಿಲ್ಲ ಎಂದು ನಿಡಗುಂದಿ ಪಿಎಸ್ ಐ ಚಂದ್ರಶೇಖರ ಹೆರಕಲ್ಲ ತಿಳಿಸಿದ್ದಾರೆ.