ವಿಜಯಪುರ: ದಲಿತರು ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ದಲಿತರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಸಿಂದಗಿ ಪಟ್ಟಣದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಸಿಕ್ಕಾಗಿನಿಂದ ಕಾಂಗ್ರೆಸ್ ಗೆ ಬೆಂಬಲಿಸಿಕೊಂಡು ಬಂದಿದ್ದಾರೆ. ಜಗಜೀವನ ರಾಮ ಅವರು ಕೋನೆಯವರೆಗೂ ಸಹಿತ ಕೇಂದ್ರ ಸರ್ಕಾರದಲ್ಲಿ ನಿರಂತರ ಮಂತ್ರಿಯಾಗಿದ್ದರು. ದೇಶದ ಅಭಿವೃದ್ಧಿ ಯಲ್ಲಿ ಜಗಜೀವನ ರಾಮ ಅವರ ಪಾತ್ರ ಇದೆ ಎಂದರು. ಅಂಬೇಡ್ಕರ್ ಅವರು ಈ ದೇಶಕ್ಕೆ ಸಂವಿಧಾನ ಕೊಟ್ಟರು. ಆ ಸಂವಿಧಾನದಲ್ಲಿ ಸಾಕಷ್ಟು ಹಕ್ಕುಗಳನ್ನು ಕೊಟ್ಟರು ಎಂದರು.
ಸ್ವಾತಂತ್ರ್ಯ ಹೋರಾಟದ ವೇಳೆ ಬಿಜೆಪಿ ರಾಷ್ಟ್ರೀಯ ಪಕ್ಷ ಇರಲಿಲ್ಲ. 1950 ರ ರಲ್ಲಿ ಜನ ಸಂಘ ಹುಟ್ಟಿತು, ಇದು ಆರ್ ಎಸ್ ಎಸ್ ನ ರಾಜಕೀಯ ಮುಖವಾಡ. 1980 ರಲ್ಲಿ ಬಿಜೆಪಿ ಪಕ್ಷ ಹುಟ್ಟಿತು. ಯಾರಾದರೂ ಬಿಜೆಪಿಗರು ದೇಶಕ್ಕಾಗಿ ಪ್ರಾಣ ತೆತ್ತಿದ್ದಾರಾ ? ದೇಶಕ್ಕಾಗಿ ಪ್ರಾಣ ಕೊಟ್ಟಿದ್ದು ಕಾಂಗ್ರೆಸ್ ನವರು ಮಾತ್ರ ಬಿಜೆಪಿಗರಲ್ಲ ಎಂದರು.
ದೇಶದ ಅಭಿವೃದ್ಧಿಗೆ ಬಿಜೆಪಿಯವರ ಕೊಡುಗೆ ಏನಿಲ್ಲ. ಕೆಲ ದಲಿತರು ಹೊಟ್ಟೆ ಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ. ಜಿಗಜಿಣಗಿ, ಕಾರಜೋಳ ಅವರು ನಿಮಗೆ ನ್ಯಾಯ ಕೊಡಿಸಲು ಹೋಗಿಲ್ಲ ಹೊಟ್ಟೆ ಪಾಡಿಗಾಗಿ ಹೋಗಿದ್ದಾರೆ ಎಂದರು.
ಬಾಬು ಜಗಜೀವನರಾಮ ಅವರ ಬಗ್ಗೆ ಗೌರವ ಇದ್ದರೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು.ವಾಜಪೇಯ, ನರೇಂದ್ರ ಮೋದಿ, ಯಡಿಯೂರಪ್ಪ, ಜಗದೀಶ ಶೆಟ್ಟರ, ಬಸವರಾಜ್ ಬೊಮ್ಮಾಯಿ ಏನು ಮಾಡಿದ್ದಾರೆ ಹೇಳಲಿ ಎಂದರು.
ಬಸವರಾಜ್ ಬೊಮ್ಮಾಯಿ ಧಮ್ ಇದ್ದರೆ ಒಂದೇ ವೇದಿಕೆ ಮೇಲೆ ಬನ್ನಿ ಚರ್ಚೆ ಮಾಡೋಣ. ಜನರಿಗೆ ಯಾಕೆ ದಾರಿ ತಪ್ಪಿಸುತ್ತೀರಾ. ವೇದಿಕೆ ಮೇಲೆ ಬರಲು ನಾನು ರೆಡಿ ಎಂದರು.
ಮೀಸಲಾತಿ ಕೊಟ್ಟಿದ್ದು, ಎಸ್ ಸಿ ಪಿ, ಟಿ ಎಸ್ ಪಿ ಗೆ ಹಣ ಕೊಟ್ಟಿದ್ದು ಯಾರು..? ಕಾಂಟ್ಯಾಕ್ಟರ್ ಗಳಿಗೆ ಮೀಸಲಾತಿ ಕೊಟ್ಟಿದ್ದು ಯಾರು ? ನಿಮಗೆ ನಾಚಿಕೆಯಾಗಬೇಕು. ನಾನು ಹೆಳೋದೇ ಸತ್ಯಾ ಎಂದು ತಿಳಿದುಕೊಳ್ಳಬೇಡಿ, ವಿಚಾರ ಮಾಡಿ ಎಂದರು.
ಆಂಜನೇಯ ನವರಿಗೆ ಹೇಳಿದ ಅಂಬೇಡ್ಕರ್ ತರಹ ಸೂಟ್ ಹಾಕಿಕೊಂಡು ಎಸ್ ಸಿ ಪಿ, ಟಿಎಸ್ ಪಿ ಮಂಡಿಸುವಂತೆ ನಾನು ಹೇಳಿದ್ದೆ. ಬೆಳಗಾವಿ ಅಧಿವೇಶನದಲ್ಲಿ ಆಂಜನೇಯ ಮಂಡಿಸಿದರು. ಇಂದು ನಾವೇ ಅಧಿಕಾರದಲ್ಲಿ ಇದ್ದರೆ ಬಜೆಟ್ ನ ಅನುದಾನ ಇನ್ನೂ ಹೆಚ್ಚಾಗುತಿತ್ತು ಎಂದರು.
ಮಿಸ್ಟರ್ ಕಾರಜೋಳ ನಿಮಗೆ ಕೇಳಲು ಧಮ್ ಇಲ್ವಾ. ಬಜೆಟ್ ಹೆಚ್ಚಾದಂತೆ ನಿಮಗೂ ಹಣ ಹೆಚ್ಚಾಗಬೇಕು, ಆದರೆ ಈಗ ಬಜೆಟ್ ಹೆಚ್ಚಾದರೂ ಅನುದಾನ ಕಡಿಮೆಯಾಗಿದೆ. ಅಪ್ಪಿ ತಪ್ಪಿಯೂ ಸಹಿತ ಬಿಜೆಪಿಗೆ ನೀವು ಮತ ಹಾಕಬಾರದು ಎಂದರು.
ಕಾಂಟ್ರ್ಯಾಕ್ಟ ನಲ್ಲಿ ಮೀಸಲಾತಿ ಕೊಟ್ಟಿದ್ದು ಯಾವುದಾದರೂ ರಾಜ್ಯ ಇದ್ದರೆ ಅದು ಕರ್ನಾಟಕದಲ್ಲಿ ಮಾತ್ರ. 50 ಲಕ್ಷದ ವರೆಗೆ ಮೀಸಲಾತಿ ಕೊಟ್ಟೆ. ಬಾಬು ಜಗಜೀವನ ರಾಮ ಅಭಿವೃದ್ಧಿ ನಿಗಮ ಮಾಡಿದ್ದು ನಮ್ಮ ಸರ್ಕಾರ. ದಯವಿಟ್ಟು ಈ ಸೋಗಲಾಡಿ, ಡೋಂಗಿಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಿಗಜಿಣಗಿ, ಕಾರಜೋಳ ಇವರ ಮಾತು ಕೇಳಬೇಡಿ ಎಂದರು.
ಇಂದು ನಿಮಗೆ ಅಭಿವೃದ್ಧಿ ಮಾಡುವವರು ಅದು ಕೇವಲ ಕಾಂಗ್ರೆಸ್ ನವರು ಮಾತ್ರ. ಹಿಂದೆ ಹೇಗೆ ಕಾಂಗ್ರೆಸ್ ಗೆ ಬೆಂಬಲ ಕೊಡುತ್ತಿದ್ದೀರಿ, ಅದೇ ತರಹ ಈ ಬಾರಿ ಕಾಂಗ್ರೆಸ್ ಗೆ ಬೆಂಬಲ ಕೊಡಿ. ಬಿಜೆಪಿಯವರು ಲೂಟಿ ಗಿರಾಕಿಗಳು, ಎಲೆಕ್ಷನ್ ನಲ್ಲಿ ಬಂದು ದುಡ್ಡು ಕೊಡತಾರೆ ಎಂದರು. ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪರ ಮತ ಚಲಾಯಿಸುವಂತೆ ಮನವಿ ಮಾಡಿದರು.
ಇದು ತೆಲುಗು ಕಿರುತೆರೆ ನಟ ಚಂದು ಆತ್ಮಹತ್ಯೆಗೂ ಮುನ್ನ ಬರೆದ ಸಂದೇಶ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಂದುವಿನ ಕೊನೆಯ ಮೆಸೇಜ್…
ಕರ್ನಾಟಕದ ಹಲವೆಡೆ ಮೇ 19ರಿಂದ 21 ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನೀರಿನ ಮಿತ ಬಳಕೆ, ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ತಮ್ಮ ಇತಿ ಮಿತಿಯಲ್ಲಿ ಸಣ್ಣ ಕೊಡುಗೆಗಳನ್ನು ನೀಡುವ ಮೂಲಕ…
ಮದ್ಯ ಸೇವನೆಗೆಂದು ಕರೆದೊಯ್ದು ಕೊಲೆ ಮಾಡಿರುವ ಘಟನೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಹೋಗಿದ್ದಾರೆ. ಆದ್ರೆ ನೆಲದ ಕಾನೂನು ವ್ಯಾಪ್ತಿಯಲ್ಲಿ ಏನೇನು ಕ್ರಮ ತೆಗೆದುಕೊಳ್ಳಬೇಕೋ ಅದು ಸರ್ಕಾರದ ಜವಾಬ್ದಾರಿ.…
ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಎಥಿಲಿನ್ ಆಕ್ಸೈಡ್ ಪ್ರಮಾಣ ಹೆಚ್ಚಾಗಿರುವುದರಿಂದ ಇದನ್ನು ಬಳಸದಂತೆ ಅಧಿಕಾರಿಗಳಿಂದ ಉತ್ತರ ಕನ್ನಡ ಜಿಲ್ಲೆ ಆಹಾರ ಸುರಕ್ಷತಾ…