ಗದಗ: ಬ್ಯಾನರ್ ಅಳವಡಿಸುವಾಗ ಮೂವರು ಫ್ಯಾನ್ಸ್ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ನಟ ಯಶ್ ಅವರು ಗದಗದ ಸೂರಣಗಿ ಗ್ರಾಮಕ್ಕೆ ತಲುಪಿದ್ದಾರೆ.
ಯಶ್ ಅವರು ಲಕ್ಷ್ಮೇಶ್ವರ ತಾಲೂಕಿನ ಐಬಿಯಲ್ಲಿ ಎಸ್ಪಿ ನಾಮೇಗೌಡರ ಜೊತೆ ಕುಳಿತು ಕೆಲ ಸಮಯ ಚರ್ಚೆ ನಡೆಸಿ, ಘಟನೆ ಬಗ್ಗೆ ಎಲ್ಲ ವಿವರವನ್ನು ಎಸ್ಪಿಅವರಿಂದ ಯಶ್ ತಿಳಿದುಕೊಂಡಿದ್ದಾರೆ. ಬಳಿಕ ನೇರ ಗ್ರಾಮಕ್ಕೆ ಎಸ್ಪಿಯವರ ಕಾರಿನಲ್ಲೇ ಬಂದಿದ್ದಾರೆ.
ಈ ವೇಳೆ ಮೃತ ಯುವಕರ ಕುಟುಂಬಸ್ಥರನ್ನು ಭೇಟಿ ಮಾಡಿ ಯಶ್ ಅವರು ಸಾಂತ್ವನ ಹೇಳಿದ್ದಾರೆ.ಯಶ್ ಬರುತ್ತಿರುವ ಸುದ್ದಿ ಕೇಳಿ ಸಾಕಷ್ಟು ಜನರು ಮೊದಲೇ ಆಗಮಿಸಿದ್ದರು.