News Karnataka Kannada
Monday, April 29 2024
ಗದಗ

ಅಭಿಮಾನ ತೋರಿಸೋ ಭರದಲ್ಲಿ ನಿಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳಬೇಡಿ

Don't risk your life in the name of pride
Photo Credit : News Kannada

ಗದಗ: ಬ್ಯಾನರ್ ಅಳವಡಿಸುವಾಗ ಮೂವರು ಫ್ಯಾನ್ಸ್ ವಿದ್ಯುತ್ ಸ್ಪರ್ಶಿಸಿ ​ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ನಟ ಯಶ್ ಅವರು ಗದಗದ ಸೂರಣಗಿ ಗ್ರಾಮಕ್ಕೆ ತಲುಪಿ ಮನೆಯವರೊಂದಿಗೆ ಸಾಂತ್ವನ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಯಶ್  ನಮ್ಮ ಮೇಲೆ ಅಭಿಮಾನ ತೋರಿಸೋ ಭರದಲ್ಲಿ ನಿಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳಬೇಡಿ, ನನ್ನ ಬರ್ತ್​ಡೇಯಿಂದ ಯಾರಿಗೂ ತೊಂದರೆ ಆಗಬಾರದು ಎಂದು ಆಚರಿಸಿಕೊಂಡಿಲ್ಲ ಎಂದು ಯಶ್ ಅವರು ಬೇಸರಲ್ಲಿಯೇ ಹೇಳಿದ್ದಾರೆ.

ಏನು ಹೇಳಿದರು ಆ ತಂದೆ ತಾಯಿಗೆ ಮಗ ತಿರುಗಿ ಬರುತ್ತಾನಾ? ಎಲ್ಲ ಹುಡಗರು 25 ವರ್ಷಗಳ ಒಳಗಿನವರು. ಅಭಿಮಾನ ತೋರಿಸೋದರಲ್ಲಿ ಈ ಬ್ಯಾನರ್ ಕಟ್ಟೋದು, ಬೈಕ್​ ಚೇಸ್​​​ ಮಾಡಿಕೊಂಡು ಬಂದು ಫೋಟೋ ತೆಗೆಯೋದು ಎಲ್ಲ ಬಿಟ್ಟು ಬಿಡಿ. ನಿಜವಾಗಲು ನಿಮ್ಮ ಪ್ರೀತಿ ತೋರಿಸಬೇಕು ಅಂದರೆ ನಿಮ್ಮ ಜೀವನಕ್ಕೆ ಒಳ್ಳೆಯದನ್ನು ಮಾಡಿಕೊಳ್ಳಿ ಅಷ್ಟು ಸಾಕು. ದಯವಿಟ್ಟು ಈ ರೀತಿ ಯಾರು ಮಾಡಬಾರದು ಎಂದು ಹೇಳಿದರು.

ನನ್ನ ಬಗ್ಗೆ ಬೇಜಾರು ಮಾಡಿಕೊಂಡರೂ ಪರವಾಗಿಲ್ಲ ಅಂತ ನಾನು ದೂರ ಇರುತ್ತೇನೆ. ಪ್ರತಿಯೊಬ್ಬ ಅಭಿಮಾನಿಯೂ ಅವರವರ ಬದುಕಿನಲ್ಲಿ ಬೆಳೆದರೆ ಅದೇ ನಮಗೆ ಅವರು ಅಭಿಮಾನ ತೋರಿಸಿದಂತೆ’ ಎಂದು ಯಶ್​ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು