News Karnataka Kannada
Sunday, May 12 2024
ಗದಗ

ಸ್ವಚ್ಛ ಮುತ್ತುಗಳಂತೆ ಕಾಂಗ್ರೆಸ್‌ ನಾಯಕರು ವರ್ತಿಸುತ್ತಿದ್ದಾರೆ: ಸಿಎಂ

Cm Bommai
Photo Credit :

ಗದಗ : ಸ್ವಚ್ಛ ಮುತ್ತುಗಳಂತೆ ಕಾಂಗ್ರೆಸ್‌ ನಾಯಕರು ವರ್ತಿಸುತ್ತಿದ್ದಾರೆ. ಸಾವಿನ ಮನೆಯಲ್ಲಿ ರಾಜಕೀಯ ಲಾಭದ ಎಣಿಕೆ ಬುದ್ಧಿ ಬಿಡಿ. ವಿರೋಧ ಪಕ್ಷವಾಗಿಯೂ ನೀವು ವಿಫಲರಾಗಿದ್ದೀರಿ ಎಂದು ವಿಪಕ್ಷಗಳ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗದಗದಲ್ಲಿ ಕಾಂಗ್ರೆಸ್‌ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದ ಸಿಎಂ, ‘ನಮ್ಮ ನಾಯಕ ಈಶ್ವರಪ್ಪ ಮೇಲೆ ಗೂಬೆ ಕೂರಿಸುವ ಯತ್ನ ಮಾಡಲಾಗ್ತಿದೆ. ಸಂತೋಷ್‌ ಆತ್ಮಹತ್ಯೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುತ್ತಿದೆ. ಸ್ವಚ್ಛ ಮುತ್ತುಗಳಂತೆ ಕಾಂಗ್ರೆಸ್‌ ನಾಯಕರು ವರ್ತಿಸುತ್ತಿದ್ದಾರೆ. ಸಾವಿನ ಮನೆಯಲ್ಲಿ ರಾಜಕೀಯ ಲಾಭದ ಎಣಿಕೆ ಬುದ್ಧಿ ಬಿಡಿ. ವಿರೋಧ ಪಕ್ಷವಾಗಿಯೂ ನೀವು ವಿಫಲರಾಗಿದ್ದೀರಿ. ಇನ್ನುಕೇಂದ್ರದ ರೀತಿ ರಾಜ್ಯದಲ್ಲೂ ವಿಪಕ್ಷ ಸ್ಥಾನ ಕಳೆದುಕೊಳ್ತೀರಿ’ ಎಂದು ಕಿಡಿಕಾರಿದರು.

ನಂತ್ರ ಬಾಗಲಕೋಟೆ ಜಿಲ್ಲೆ ಇಳಕಲ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ,’ ಸಂತೋಷ್‌ ಆತ್ಮಹತ್ಯೆಯ ಬಗ್ಗೆ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಯಾರ ಬಳಿ ಏನೇನು ಮಾಹಿತಿ ಇದೆ ಎಂದು ಸಂಗ್ರಹಿಸಲಾಗುತ್ತೆ. ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ’ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು