News Karnataka Kannada
Thursday, May 02 2024
ಹುಬ್ಬಳ್ಳಿ-ಧಾರವಾಡ

ನೀವು ಎಲ್ಲಿ ಅಕ್ಕಿ ಕೊಟ್ಟಿದ್ದೀರಿ, ಸುಳ್ಳು ಹೇಳೋರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ: ಜೋಶಿ ಕಿಡಿ

ಮಂತ್ರಾಕ್ಷತೆ ನಾವು ಕೊಡುತ್ತಿದ್ದೇವೆ. ಇದರ ವಿವಾದವನ್ನು ಕಾಂಗ್ರೆಸ್ ಮಾಡುತ್ತಿದೆ. ನಮಗೆ ರಾಮಮಂದಿರ ಉದ್ಘಾಟನೆ ಸಂಪನ್ನವಾಗಬೇಕು. ನಮ್ಮ ಅಕ್ಕಿ ತಗೊಂಡು ಮಂತ್ರಾಕ್ಷತೆ ಅಂತಾರೆ. ಹೌದಪ್ಪಾ ನೀವು ಎಲ್ಲಿ ಅಕ್ಕಿ ಕೊಟ್ಟಿದ್ದೀರಿ. ಸುಳ್ಳು ಹೇಳೋರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
Photo Credit : News Kannada

ಹುಬ್ಬಳ್ಳಿ: ಮಂತ್ರಾಕ್ಷತೆ ನಾವು ಕೊಡುತ್ತಿದ್ದೇವೆ. ಇದರ ವಿವಾದವನ್ನು ಕಾಂಗ್ರೆಸ್ ಮಾಡುತ್ತಿದೆ. ನಮಗೆ ರಾಮಮಂದಿರ ಉದ್ಘಾಟನೆ ಸಂಪನ್ನವಾಗಬೇಕು. ನಮ್ಮ ಅಕ್ಕಿ ತಗೊಂಡು ಮಂತ್ರಾಕ್ಷತೆ ಅಂತಾರೆ. ಹೌದಪ್ಪಾ ನೀವು ಎಲ್ಲಿ ಅಕ್ಕಿ ಕೊಟ್ಟಿದ್ದೀರಿ. ಸುಳ್ಳು ಹೇಳೋರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಒಂದು ಕಾಳು ಅಕ್ಕಿ ಕೊಟ್ಟಿಲ್ಲ ನೀವು. ಮೊದಲು ಶ್ರೀರಾಮ ಇಲ್ಲ ಎಂದು ಅಪಮಾನ ಮಾಡಿದ್ರಿ. ಶ್ರೀರಾಮನ ಹುಟ್ಟಿನ ಬಗ್ಗೆ ಪ್ರಶ್ನೆ ಮಾಡಿದ್ರಿ. ಇದೀಗ ಎಲ್ಲ ಆದ ಮೇಲೆ ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ ನಮ್ಮ ಅಕ್ಕಿ ಅಂತಿದ್ದಾರೆ‌. ನೀವು ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು ಎಂದರು.

ಕಾಂಗ್ರೆಸ್ ನವರು ಇಷ್ಟು ದಿನ ರಾಮ ಇಲ್ಲ ಅಂತಿದ್ರು. ಇದೀಗ ಪೂಜೆ ಮಾಡೋಕೆ ಹೇಳಿದ್ದಾರೆ. ಮೊನ್ನೆ ಸಿದ್ದರಾಮಯ್ಯ ಗುಡಿ ಒಳಗೆ ಹೋಗಲಿಲ್ಲ. ಇದನ್ನೆಲ್ಲಾ ರಿಪೇರಿ ಮಾಡೋಕೆ ಮಾಡಿದ್ದಾರೆ. ಕರಸೇವಕರ ಮೇಲೆ ಗುಂಡು ಹಾರಿಸಿದ್ದು ಯಾರೂ ಅನ್ನೋದು ಗೊತ್ತಿದೆ ಎಂದು ಅವರು ಹೇಳಿದರು.

ಯಾರೂ ರಾಮ ಭಕ್ತರಿದ್ದಾರೆ, ಬಿಜೆಪಿ ಪರ‌ ಕೆಲಸ ಮಾಡೋರನ್ನ ಹೊರಗೆ ಹಾಕಬೇಕು ಅಂತಾರೆ. ಆದ್ರೆ ನಾವು ಅಷ್ಟು ಸರಳವಾಗಿ ಹೊರಗೆ ಹೋಗಲ್ಲ. ನಾವು ಹೋರಾಟ ಮಾಡಿ ಇಲ್ಲಿಗೆ ಬಂದಿದ್ದೇವೆ. ಹುಬ್ಬಳ್ಳಿಯ ಗಲಭೆ ಮಾಡಿದವರು ನಿಮಗೆ ಅಮಾಯಕರು, ಡಿಜೆ ಹಳ್ಳಿ ಕೆಜಿ ಹಳ್ಳಿ ಗಲಾಟೆ ಮಾಡಿದವರು ನಿಮಗೆ ಅಮಾಯಕರು. ಮಂಗಳೂರ ಬಾಂಬ್ ಬ್ಲಾಸ್ಟ್ ಮಾಡಿದವರು ನಿಮಗೆ ಸಹೋದರರು. ಹೀಗಾಗಿ ನಿಮಗೆ ಐಎಸ್ ಮಾದರಿ ಆಡಳಿತ ಅನ್ನಲಾರದೆ ಏನ ಅನಬೇಕು‌ ಎಂದು ಜೋಶಿ ಕಿಡಿ ಕಾರಿದರು.

ಮಂತ್ರಿಗಿರಿ ಉಳಿಬೇಕಲ್ಲ ಹಾಗಾಗಿ ನನ್ನ ಬೈಯುತ್ತಿದ್ದಾರೆ. ನನ್ನ‌ ಬೈದರೇ ,ಬಿಜೆಪಿ ಮೋದಿ ಅವರನ್ನು ಬೈದ್ರೆ ಮಂತ್ರಿಗಿರಿ ಉಳಿಯತ್ತೆ ಅನ್ನೋದಕ್ಕೆ ಮಾತಾಡ್ತಿದ್ದಾರೆ. ಮಾತಾಡಲಿ ಪಾಪ ಎಂದು ಅವರು ಹೇಳಿದರು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಲ್ಲಿ ಅಕ್ಕಿ ಕೊಡುತ್ತಿದ್ದೇವೆ. ಆ ರಸೀದಿ ಕೊಡೋಕೆ ಹೇಳಿದ್ದೇವೆ. ಯಾಕಂದ್ರೆ ಎಷ್ಟು ಕೆಜಿ ಏನೂ ಅನ್ಮೋ ರೆಕಾರ್ಡ್ ಉಳಿಯಲ್ಲ. ಹಾಗೆ ಕೊಡೋದ ಆದ್ರೆ ಯಾರ ಅಕ್ಕಿ ಕೊಡ್ತಾರೆ ಅನ್ನೋದು ಹೇಗೆ ಗೊತ್ತಾಗಬೇಕು. ನಾವು ರಸೀದಿ ಕೊಡಲ್ಲ ಅಂದ್ರಲ್ಲ ಅಂದರೆ ಏನರ್ಥ. ಇದು ಸಂಪೂರ್ಣ ಕೇಂದ್ರ ಬೊಕ್ಕಸದಿಂದ ಕೊಡ್ತೀರೋ ಯೋಜನೆ. ನಾವು 10 ಕೆಜಿ ಅಕ್ಕಿ ಕೊಡ್ತೀವಿ ಅಂದಿದ್ರಿ. 10 ಕೆಜಿ ಅಕ್ಕಿ ಕೊಡಿ ಎಂದ ಜೋಶಿ ಟೀಕಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು