ಹುಬ್ಬಳ್ಳಿ: ಲಿಂಗಾಯತ ಸಮುದಾಯ ಬೆಳೆದು ನಿಂತಿದೆ. ಎರಡನೇ ಪೀಳಿಗೆಯಲ್ಲಿ ಲಿಂಗಾಯತ ಸಮುದಾಯದ ಸಿಸಿ ಪಾಟೀಲ್, ಮುರಗೇಶ ನಿರಾಣಿ, ಸೋಮಣ್ಣ, ಬಸವರಾಜ ಯತ್ನಾಳ, ಶಶಿಕಲಾ ಜೊಲ್ಲೆ, ಎಲ್ಲ ಪ್ರದೇಶದಲ್ಲಿ ಅವಕಾಶ ಮಾಡಿಕೊಟ್ಟಿದೆ. ಪಕ್ಷ ಸಂಘಟನೆ, ಚುನಾವಣೆ ನೀತಿ, ನಾವು ಮುಂದು ವರೆಸಿಕೊಂಡು ಹೋಗುತ್ತೇವೆ. ಪಕ್ಷವನ್ನು ಗೆಲ್ಲಸುತ್ತೇವೆ. ಪಕ್ಷ ಮತ್ತೇ ಪುಟ್ಟದೇದ್ದು ನಮ್ಮ ಎಂಎಲ್ಎ ಗಳನ್ನು ಗೆಲ್ಲಿಸಿ ಮತ್ತೊಮ್ಮೆ ಬಿಜೆಪಿ ಸರ್ಕಾರ ತರಲು ಶತಸಿದ್ದ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಹೆಸರು ಯಾರದು ಅಂದ್ರೆ 2 ಹೆಸರು ಇರತ್ತೆ. ಜೆಡಿಎಸ್ ನಲ್ಲಿ ಕುಮಾರಸ್ವಾಮಿ ಹೆಸರು ಇರತ್ತೆ. ನಮ್ಮ ಪಕ್ಷದ ಲ್ಲಿ ನಾಯಕತ್ವ ಯಡಿಯೂರಪ್ಪ. ಜಗದೀಶ್ ಶೆಟ್ಟರ್ ಮುಂದುವರೆಸಿಕೊಂಡು ಹೋದ್ರೆ ಚೆನ್ನಾಗಿ ಇರ್ತಿತ್ತು .ಆದ್ರೆ ಅವರು ಆ ತೀರ್ಮಾನ ಅವರು ಮಾಡಲಿಲ್ಲಾ. ಆದ್ರು ಬದಲಾವಣೆ ತರೋ ಅಂತಹ ಕಾಲ ಇದು. ಒಂದು ಪೀಳಿಗೆ ಇಂದ ಮತ್ತೊಂದು ಪೀಳಿಗೆಗೆ ಅವಕಾಶ ಕೊಡಬೇಕಾಗಿತ್ತು. ಯಡಿಯೂರಪ್ಪ, ಈಶ್ವರಪ್ಪ ಅದೇ ಸರಣಿಯಲ್ಲಿ ಜಗದೀಶ್ ಶೆಟ್ಟರ್ ಬಂದಿದ್ದಾರೆ. ರಾಜ್ಯ, ಜಿಲ್ಲಾ ಮಟ್ಟದ ಕೋರ್ ಕಮಿಟಿಯಲ್ಲಿ ಶೆಟ್ಟರ್ ಪ್ರಶ್ನೆ ಉದ್ಭವಿಸಲಿಲ್ಲಾ. ಮೇಲೆ ತೀರ್ಮಾನ ತೆಗೆದುಕೊಂಡ ಆಮೇಲೆ ಹೇಳಬೇಕಾಯಿತ್ತು.
ಪಕ್ಷದಲ್ಲಿ ಷಡ್ನಯಂತರ ಕ್ಕೆ ಪ್ರತಿಕ್ರಿಯಿಸಿ, ಪಕ್ಷದಲ್ಲಿ ಸರ್ವೆ, ಎಲ್ಲಾ ಮಾಹಿತಿ, ನಾನಾ ರೀತಿ ಎಲ್ಲರಿಗೂ ತಿಳಿದಿರುತ್ತದೆ. ಈಗೀನ ಕಾಲದಲ್ಲಿ ಎನ್ನು ಮುಚ್ಚಿ ಇಡಲು ಸಾಧ್ಯವಿಲ್ಲ. ಬಿಜಿಪಿ ಪಕ್ಷದಲ್ಲಿ ಶೆಟ್ಟರ್ ಪ್ರಭಾವ ವಿದೆ. ಅದನ್ನು ಅಲುಗಳೆಯುವುದಿಲ್ಲಾ. ನಿನ್ನೆ ಸ್ವತಃ ಅಮಿತ್ ಶಾ ಶೆಟ್ಟರ್ ಜೊತೆ ಮಾತಾಡಿದ್ದಾರೆ ಎಂದರು.